ಭಟ್ಕಳ: ನಾಡಿನ ಅಪರೂಪದ ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಅರುಣಕುಮಾರ ಬುಧವಾರದಂದು ವೈದ್ಯರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹೃದಯಸ್ಪರ್ಶಿಯಾಗಿ ಸನ್ಮಾನಿಸಿದರು.

ಶ್ರೇಷ್ಠ ವೈದ್ಯ  ಪುರಸ್ಕಾರ ಪಡೆದ ಡಾ ಡಾಅರುಣಕುಮಾರ್ ಅವರನ್ನ ವೈದ್ಯರು, ಸಿಬ್ಬಂದಿಗಳು, ರೋಗಿಗಳು, ವಿವಿಧ ಸಂಘಟನೆಯವರು ಗೌರವಿಸಿದರು.

ಇ ಸಂದರ್ಭದಲ್ಲಿ ಮಾತನಾಡಿದ ಡಾ. ಅರುಣಕುಮಾರ್, ಈ ಪ್ರಶಸ್ತಿ ನನಗೆ ದೊರಕಿರುವುದು ತುಂಬಾ ಸಂತೋಷವಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ, ವೈದ್ಯರ ತಂಡ, ಸಿಬ್ಬಂದಿ ವರ್ಗ ಹಾಗೂ ಭಟ್ಕಳದ ಸಾರ್ವಜನಿಕರು. ಎಲ್ಲಾ ಸಮಯದಲ್ಲಿಯೂ ಆಸ್ಪತ್ರೆ ವೈದ್ಯಾಧಿಕಾರಿ ಡಾ ಸವಿತಾ ಕಾಮತ್ ಮತ್ತು ವೈದೃರ ತಂಡ ಹಾಗೂ ಸಿಬ್ಬಂದಿ ಬೆಂಬಲ ಇದಕ್ಕೆ ಮುಖ್ಯ ಕಾರಣವಾಗಿದೆ. ಅದೇ ರೀತಿ ನಾನು ಓಟಿಯಿಂದ ಎಷ್ಟು ತಡವಾಗಿ ಬಂದರು ಕೂಡ ಅಲ್ಲಿ ತನಕ ಕಾದು ಕುಳಿತು ಚಿಕಿತ್ಸೆ ಪಡೆದುಕೊಂಡು ಹೋಗುತ್ತಿರುವುದು ಕೂಡ ಪ್ರಶಸ್ತಿ ಲಭಿಸಲು ಒಂದು ಕಾರಣವಾಗಿದೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ ಸವಿತಾ ಕಾಮತ ಮಾತನಾಡಿ, ನಮ್ಮ ಆಸ್ಪತ್ರೆಯ ವೈದ್ಯ ಡಾ. ಅರುಣರವರಿಗೆ ರಾಜ್ಯ ಪ್ರಶಸ್ತಿ ಲಭಿಸಿರುವುದು ನಮ್ಮ ಆಸ್ಪತ್ರೆಗೆ ಹೆಮ್ಮೆ ತಂದಿದೆ. ರಾಜ್ಯ ಪ್ರಶಸ್ತಿಗೆ ಬೆಲೆ ಬಂದಿರುವುದು ಡಾ. ಅರುಣ ಅವರಿಗೆ ಪ್ರಶಸ್ತಿ ಸಿಕ್ಕ ಮೇಲೆ.  ಅವರು ಮಾಡುವ ಕೆಲಸದಿಂದ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಹೀಗೆಯೇ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಶಸ್ತಿಗಳು ಅವರನ್ನ ಅರಸಿ ಬರುವಂತಾಗಲಿ.  ನಿಮ್ಮ ಸೇವೆ ಭಟ್ಕಳ ಜನತೆಗೆ ಮತ್ತು ಸರ್ಕಾರಿ ಆಸ್ಪತ್ರೆಗೆ ಇನ್ನಷ್ಟು ಲಭಿಸಲಿ. ಎಷ್ಟೇ ಒಳ್ಳೆ ಕೆಲಸ ಮಾಡಿದರು ಕೂಡ  ಕಾಲು ಎಳೆಯುವವರು ಇದ್ದೇ ಇರುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಕೈ ಹಿಡಿಯುವವರ ಬಗ್ಗೆ ಯೋಚನೆ ಮಾಡಿ. ನಿಮ್ಮ ಜನ ಸೇವೆ ಮುಂದುವರೆಸಿ ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಭಟ್ಕಳ ನಾಮಧಾರಿ ಸಮಾಜದ ಗೌರವಾಧ್ಯಕ್ಷ  ಕೃಷ್ಣ ನಾಯ್ಮ ಆಸರಕೇರಿ,  ಸಮಾಜ ಸೇವಕ ನಿಸ್ಸಾರ್ ಅಹ್ಮದ ಮಾತನಾಡಿ,  ಡಾ ಸತೀಶ್ ನಾಯ್ಕ, ಡಾ ಕಮಲ ನಾಯ್ಕ, ಡಾ. ಲಕ್ಷ್ಮಿಶ ನಾಯ್ಕ, ಡಾ ಉಮೇಶ್, ಡಾ ಸುರಕ್ಷಿತ್ ಶೆಟ್ಟಿ, ನಜೀರ್ ಕಾಸಿಂಜೀ, ಇರ್ಷಾದ್, ವಿಷ್ಣು ದೇವಾಡಿಗ, ನಾಗೇಂದ್ರ ನಾಯ್ಕ, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.