ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಳಿಯಾಳ (Haliyal) : ತಾಲೂಕಿನಲ್ಲಿ ಹೆಚ್ಚಾಗಿರುವ
ಮೀಟರ್ ಬಡ್ಡಿ ಹಾಗೂ ಮೈಕ್ರೋಫೈನಾನ್ಸ್ (Micro Finance) ವ್ಯವಹಾರಗಳಿಂದ ಮಹಿಳೆಯರು ಬೇಸತ್ತಿದ್ದಾರೆ. ತಮ್ಮನ್ನು ರಕ್ಷಿಸಿ ಮಾಫಿಯಾ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ಷೇತ್ರದ ಶಾಸಕರು, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ(R V Deshapande) ಅವರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಪಟ್ಟಣದ ತಾಲೂಕ ಪಂಚಾಯತ ಸಭಾ ಭವನದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆ (KDP Meeting) ಸಂದರ್ಭದಲ್ಲಿ ಹಳಿಯಾಳ(Haliyal) ತಾಲೂಕಿನ ಅಡಿಕೆಹೊಸುರು(Adikehosuru), ತಟ್ಟಿಗೇರಾ(Tattigera), ತತ್ವಣಗಿ(Tatvanagi), ಬಿಕೆ ಹಳ್ಳಿ(BK Halli) , ಕಾಳಗಿನಕೊಪ್ಪ(Kalaginakoppa), ಮುರ್ಕವಾಡ (Murkawada) ಸೇರಿದಂತೆ ವಿವಿಧ ಗ್ರಾಮಗಳ ಬಡ ಹಾಗೂ ಬುಡಕಟ್ಟು ಸಿದ್ದಿ ಸಮುದಾಯದ(Siddi Community) ಮಹಿಳೆಯರು ಆಗಮಿಸಿ ಮೈಕ್ರೋಫೈನಾನ್ಸ್ ಹಾಗೂ ಬಡ್ಡಿ ವ್ಯವಹಾರದ ಕಿರುಕುಳದ ಬಗ್ಗೆ ಶಾಸಕರಿಗೆ ದೂರಿದ್ದಾರೆ.
ಈ ಬಗ್ಗೆ ಶಾಸಕ ಆರ್ ವಿ ದೇಶಪಾಂಡೆ ಅವರು ಕೆಡಿಪಿ ಸಭೆಯಲ್ಲಿ(KDP Meeting) ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಿದರು. ಮೈಕ್ರೋಫೈನಾನ್ಸ್ ಮತ್ತು ಬಡ್ಡಿ ವ್ಯವಹಾರದ ದೂರುಗಳ ಬಗ್ಗೆಯೇ ಚರ್ಚೆ ನಡೆದು ಅಂಬಿಕಾನಗರದಿಂದ ಹಳಿಯಾಳಕ್ಕೆ ಬಂದಿರುವ ಮಾದರಿ ಗುನ್ನೆಗಾರ(ಎಮ್ ಓಬಿ) ನಾಗಿರುವ ರಾಕೇಶ ವಾಲೇಕರ ಹಾಗೂ ಆತನ ಸಂಗಡಿಗರಿಂದ ನಡೆಯುತ್ತಿರುವ ಅಕ್ರಮ ಬಡ್ಡಿ ವ್ಯವಹಾರ, ಹನುಮಾನ್ ಫೈನಾನ್ಸ್ ಹಾಗೂ ಧನಲಕ್ಷ್ಮೀ ಇತರ ಮ್ರೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ದೂರುಗಳು ಕೇಳಿ ಬಂದವು. ಅಲ್ಲದೇ ಇದೆ ರಾಕೇಶ ಕ್ರಿಮಿನಲ್ ಗಳಿಗೆ ಜಾಮೀನು ನೀಡಿ ಅಪರಾಧಿ ಕೃತ್ಯ ಹೆಚ್ಚಳಕ್ಕೆ ಸಹಕರಿಸುತ್ತಿರುವ ಬಗ್ಗೆಯೂ ದೂರು ಕೇಳಿ ಬಂದಾಗ ಶಾಸಕರು ಕೂಡಲೇ ತಹಶಿಲ್ದಾರ್ ಪ್ರವೀಣ ಹುಚ್ಚನ್ನವರ ಅವರಿಗೆ ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಸೂಚಿಸಿದರು.
ಮೈಕ್ರೋಫೈನಾನ್ಸ್ ಹಾಗೂ ಬಡ್ಡಿ ಮಾಫಿಯಾ ಬಗ್ಗೆ ಎಲ್ಲ ದೂರುಗಳು ಹಾಗೂ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಶಾಸಕ ದೇಶಪಾಂಡೆ ಅವರು
ಹಳಿಯಾಳ ಕ್ಷೇತ್ರದಲ್ಲಿ ಬಡ್ಡಿ ವ್ಯವಹಾರ ನಡೆಸುವವರ ದರ್ಬಾರ್ ಬಹಳ ನಡಿತಾ ಇದೆ. 100 ಕೊಟ್ಟರೇ 10 ಪಟ್ಟು ವಸೂಲಿ ಮಾಡುತ್ತಿರುವ ಬಗ್ಗೆ ತಮಗೆ ಸಾಕಷ್ಟು ದೂರುಗಳು ಬಂದಿವೆ. ಇದು ಅಕ್ಷಮ್ಯ ಅಪರಾಧವಾಗಿದೆ ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ನಾವು ಸಹಿಸುವುದಿಲ್ಲ ಎಂದರು.
ಮೈಕ್ರೋ ಫೈನಾನ್ಸ್ ಹಾಗೂ ಬಡ್ಡಿ ವ್ಯವಹಾರಸ್ಥರ
ಕಿರುಕುಳದ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ(CM Siddaramaiha) ನವರ ಅಧ್ಯಕ್ಷತೆಯಲ್ಲಿ ಕಠಿಣ ಕಾನೂನು ಜಾರಿಗೊಳಿಸಲು ನಿರ್ಣಯಿಸಲಾಗಿದೆ. ಸರ್ಕಾರದ ನೂತನ ಕಾನೂನು ಜಾರಿ ಆಗುವವರೆಗೂ, ಸರ್ಕಾರದ ನಿರ್ಧಾರ ಪ್ರಕಟಗೊಳ್ಳುವವರೆಗೂ ಮೈಕ್ರೋಫೈನಾನ್ಸ್ ಹಾಗೂ ಅಕ್ರಮ ಬಡ್ಡಿ ವ್ಯವಹಾರ ಸಾಲ ವಸೂಲಾತಿಗೆ ತಡೆ ಹಾಕಿ ಎಂದು ಸ್ಪಷ್ಟವಾಗಿ ಸೂಚನೆ ನೀಡಿದರು.
ಸಾರ್ವಜನಿಕರು, ನೊಂದವರು ಮೈಕ್ರೋಫೈನಾನ್ಸ್(Micro Finance) ಹಾಗೂ ಬಡ್ಡಿ ಮಾಫಿಯಾದವರಿಂದ ಕಿರುಕುಳ ಎದುರಿಸುತ್ತಿದ್ದರೆ ಹಳಿಯಾಳ ಪೋಲಿಸ್ ಠಾಣೆಗೆ(Haliyal Police Station) ನಿರ್ಭಯವಾಗಿ ದೂರು ಸಲ್ಲಿಸಿ ಎಂದು ಕರೆ ನೀಡಿದರು.
ಹಳಿಯಾಳ ಕ್ಷೇತ್ರದಲ್ಲಿ ನೊಂದಣಿ ಮಾಡಿಕೊಂಡು ಬಂದಿರುವ ಮ್ರೈಕ್ರೋಫೈನಾನ್ಸ್ ಕಂಪೆನಿಗಳೆಷ್ಟು ಅವರ ಸಂಪೂರ್ಣ ವಿವರ ಹಾಗೂ ವ್ಯವಹಾರದ ಸಂಪೂರ್ಣ ಮಾಹಿತಿ ಪಡೆಯುವಂತೆ ತಹಶಿಲ್ದಾರ್ ಗೆ ಸೂಚಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಕನಿಷ್ಕ್ , ತಾಪಂ ಆಡಳಿತಾಧಿಕಾರಿ ಎಂ ನಾಗರಾಜ, ಹಳಿಯಾಳ ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ ಇದ್ದರು.
ಇದನ್ನು ಓದಿ : ಗೋವಾದಲ್ಲಿ ಏಪ್ರಿಲ್ ಆರಂಭದಿಂದ ಹೊಸ ಶೈಕ್ಷಣಿಕ ವರ್ಷ ಶುರು.
ಮನೆ ಕಳ್ಳತನ. ಠಾಣೆಯಲ್ಲಿ ದೂರು ದಾಖಲು.
ಕಾರವಾರದಲ್ಲಿ ತಂಜಿಮ್ ಪತ್ರಿಕಾಗೋಷ್ಠಿ. ಸಾಲ್ಕೋಡು ಗೋ ಹತ್ಯೆ ಘಟನೆಗೆ ಖಂಡನೆ.