ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಪೊಲೀಸ್ ಇಲಾಖೆಯಲ್ಲಿಯೇ(Police Department ) ಅಪರೂಪ ಎಂಬಂತೆ ಓರ್ವ ಪಿಸಿಯಾಗಿ ಪೊಲೀಸ್ ಇಲಾಖೆಗೆ ಸೇರಿಕೊಂಡು ಕರ್ತವ್ಯ ನಿಷ್ಠೆಯಿಂದ ಹಂತಹಂತವಾಗಿ ಮೇಲಕ್ಕೆ ಏರಿ ಇದೀಗ ಪೊಲೀಸ್ ಇನ್ಸಫೆಕ್ಟರ್ (Police Inspector) ಆಗಿ ಪರಮಾನಂದ ಕೊಣ್ಣೂರು (Paramananda Konnuru) ಮುಂಬಡ್ತಿ ಪಡೆದಿದ್ದಾರೆ.

ಉತ್ತರಕನ್ನಡ ಜಿಲ್ಲೆಯ(Uttarkannada) ದಾಂಡೇಲಿಯ ಅಂಬಿಕಾನಗರ(Ambikanagara) ಪೊಲೀಸ್ ಠಾಣೆಯಿಂದ  ಡಿಎಸ್ಪಿ  ಶಿವಾನಂದ ಮದರ್ಖಂಡಿ ಅವರು ಪರಮಾನಂದ ಅವರಿಗೆ ಮುಂಬಡ್ತಿ ಸ್ಟಾರ್ ಗಳನ್ನು ಬುಜದ ಮೇಲೆ ತೊಡಿಸಿ ಬೀಳ್ಕೊಟ್ಟರು.

ಒಟ್ಟು 37 ವರ್ಷಗಳ ನಿರಂತರ ಸೇವೆಯ ಫಲವಾಗಿ ಮುಂಬಡ್ತಿ ಪಡೆದಿದ್ದಾರೆ. ಈ ಮೊದಲು 12 ವರ್ಷಗಳ ಕಾಲ ಪಿಎಸ್ಐ ಆಗಿ ಇವರು ಸೇವೆ ಸಲ್ಲಿಸಿದ್ದರು.

1987 ನವಂಬರ್ 20ಕ್ಕೆ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್(Civil Police Constable) ಆಗಿ ನೇಮಕಾಗೊಂಡ ಪರಮಾನಂದ ಅವರು 9 ತಿಂಗಳು ಚನ್ನಪಟ್ಟಣ(Chennapattana) ಬುನಾದಿ ತರಬೇತಿ ನಂತರ ಅಂಕೋಲಾದಲ್ಲಿ ಸೇವೆ ಆರಂಭಿಸಿದರು. 1993 ಫೆಬ್ರುವರಿ ಸಿಎಚ್ಸಿ ಬಡ್ತಿ ಪಡೆದು ಹಳಿಯಾಳದಲ್ಲಿ(Haliyal) 5 ವರ್ಷ ಸೇವೆ. 1998 ಜೂನ್ ತಿಂಗಳಲ್ಲಿ ಹಳಿಯಾಳದಿಂದ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ(dandeli Rural Station) ಕೆಲಸ. ಒಟ್ಟು 10 ವರ್ಷ ಹೆಡ್ ಕಾನ್ಸ್ಟೆ ಬಲ್(Head Constable) ಸೇವೆ ಪೂರೈಸಿ 2004 ಜನೆವರಿ ಎಎಸ್ಐ(ASI) ಆಗಿ ಬಡ್ತಿ ಪಡೆದಿದ್ದರು.

ದಾಂಡೇಲಿ ಗ್ರಾಮೀಣ ಠಾಣೆಯಿಂದ ಕಾರವಾರ ತಾಲೂಕಿನ ಸದಾಶಿವಗಡ ಠಾಣೆಯಲ್ಲಿ(Sadashivagada Station) 5  ವರ್ಷ 6ತಿಂಗಳು ಸೇವೆ ಸಲ್ಲಿಸಿ ಅಲ್ಲಿಂದ 2009 ರಲ್ಲಿ ಜೊಯಿಡಾಕ್ಕೆ (Joida) ವರ್ಗಾವಣೆಯಾಗಿ 2ವರ್ಷ ಆರು ತಿಂಗಳು, 2011 ನವಂಬರ್ PSI ಪ್ರಮೋಶನ್ (Pramotion) ಆಗಿ  ಮಂಕಿ ವರ್ಗಾವಣೆಯಾಗಿದ್ದರು. ಅಲ್ಲಿ ಪಿಎಸ್ಐ ಆಗಿ 2 ವರ್ಷ 6 ತಿಂಗಳು ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ ಅಲ್ಲಿಂದ  ಅಂಬಿಕಾನಗರ ಠಾಣೆಗೆ(Ambikanagara Station) ವರ್ಗಾವಣೆಯಾಗಿದ್ದರು.

2016ರಲ್ಲಿ  ದಾಂಡೇಲಿ ಗ್ರಾಮೀಣ ಠಾಣೆಗೆ ವರ್ಗಾವಣೆಗೊಂಡು 20 ತಿಂಗಳ ಸೇವೆ ಸಲ್ಲಿಸಿ ನಂತರ  2018 ಚುನಾವಣೆ  ನಿಮಿತ್ಯ CSP ಅಂಕೋಲಾ ಬೇಲೆಕೇರಿಯಲ್ಲಿ(Ankola Belekeri) ಒಂದು ವರ್ಷ ಸೇವೆ. ಬಳಿಕ ಕಾರವಾರ ಸಿಎಸ್ಪಿ(Karwar CSP) 6 ತಿಂಗಳು, ಅಲ್ಲಿಂದ 2019 ನವಂಬರ್ ವರ್ಗಾವಣೆಯಾಗಿ ಮಂಕಿ ಪೊಲೀಸ ಸ್ಟೇಶನ್ ನಲ್ಲಿ PSI ಆಗಿ 20 ತಿಂಗಳು.   2021 ಜುಲೈ ನಲ್ಲಿ ವರ್ಗಾವಣೆಯಾಗಿ ಮುರ್ಡೇಶ್ವರ ಪೊಲೀಸ ಸ್ಟೇಶನ್(Murdeshwar Police Station) ಅಲ್ಲಿ 20 ತಿಂಗಳು ಪಿಎಸ್ಐ (PSI) ಆಗಿ 2023 ಆಗಸ್ಟ್ ದಿಂದ ಇಲ್ಲಿಯವರೆಗೆ ಅಂಬಿಕಾನಗರ ಪೊಲೀಸ್ ಸ್ಟೇಶನ್  ಸೇವೆ ಸಲ್ಲಿಸಿದ್ದಾರೆ.

ಒಟ್ಟು 37 ವರ್ಷ ಸೇವೆ ನಂತರ ಈಗ ಇಲಾಖೆ ಪೊಲೀಸ್ ಇನ್ಸಫೆಕ್ಟರ್(Police Inspector) ಆಗಿ ಪ್ರಮೋಶನ್ ನೀಡಿ ಆದೇಶ ಮಾಡಿರುವುದು ಇವರ ಖುಷಿ ಹೆಚ್ಚಿಸಿದೆ.

ವಿಜಯಪುರ ಜಿಲ್ಲೆಯ (Vijayapura) ಬಸವನ ಬಾಗೇವಾಡಿ(Basavana Bagewadi) ತಾಲ್ಲೂಕು “ಬ್ಯಾಕೋಡ” ಗ್ರಾಮ (Byakodu Village)ಮೂಲದ ಪರಮಾನಂದ್ ಕೊಣ್ಣೂರು ಅವರು ಬಡ ಕುಟುಂಬದಿಂದ ಬಂದವರು.  ತಂದೆ ತಾಯಿಗೆ ಎಂಟು ಜನ ಮಕ್ಕಳು. ಇಬ್ಬರು ಹೆಣ್ಣು, ಆರು ಜನ ಗಂಡು ಮಕ್ಕಳು.ಇವರಲ್ಲಿ ಆರು ಜನರು ಸರಕಾರಿ ನೌಕರರಾಗಿದ್ದು ವಿಶೇಷ.  ಇಬ್ಬರು ಪೊಲೀಸ್ ಇಲಾಖೆ, ಒಬ್ಬರು ಐಟಿಬಿಪಿಎಫ್( ಫೋರ್ಸ್)    ಇನ್ನೊಬ್ಬರು kssidc , ಮತ್ತೊಬ್ಬರು ಇಎಸ್ಐ ಆಸ್ಪತ್ರೆ x ray ಟೆಕ್ನಿಶಿಯನ್,  ಮಗದೊಬ್ಬರು ಜುಡಿಷಿಯಲ್ ಇಲಾಖೆ ಮೈಸೂರ್ ಸೇವೆ ಸಲ್ಲಿಸಿ ಮೂವರು ಈಗಾಗಲೇ ನಿವೃತ್ತಿ ಹೊಂದಿದ್ದಾರೆ.  2025 ಜೂನ್ 30ಕ್ಕೆ ಪರಮಾನಂದ ಅವರು ನಿವೃತ್ತರಾಗಲಿದ್ದಾರೆ.

ತಂದೆ ಕಡು ಬಡತನದಲ್ಲಿಯೇ ಆರು ಗಂಡು ಮಕ್ಕಳನ್ನ  ಶಾಲೆ ಕಳಿಸಿದರು.  ಇದೀಗ ಎಲ್ಲರೂ ಕೂಡ ಓಲ್ಡ್ ಪೆನ್ಸೆನ್ ಗೆ ಅರ್ಹರಾಗಿದ್ದಾರೆ. ತಮ್ಮ ಬಾಲ್ಯ ಜೀವನ ನೆನೆಸಿಕೊಂಡರೆ ಈ ಮಟ್ಟಕ್ಕೆ ಬರುವ ವಿಶ್ವಾಸ ಇರಲಿಲ್ಲ.  ನಮ್ಮ ತಂದೆ ತಾಯಿ, ಅಜ್ಜ ಅಜ್ಜಿ ಮಾಡಿದ ಪುಣ್ಯದ ಫಲವಾಗಿದೆ ಎನ್ನುವ ಪರಮಾನಂದ ಅವರು ತಮ್ಮ ಸಹೋದರರು ಹಾಗೂ ಅಧಿಕಾರಿಗಳು ಸಹ ಸಿಬ್ಬಂದಿ ವರ್ಗದವರು ಸ್ನೇಹಿತರು ಮಾಡಿದ ಸಹಾಯಕ್ಕೆ ಈಗ ಫಲ ಸಿಕ್ಕಿದೆ ಎಂದು ಹೇಳಿದ್ದಾರೆ. ತಮ್ಮ ಉಸಿರು ಇರುವವರೆಗೆ ಇಲಾಖೆಗೆ ಚಿರ ಋಣಿಯಾಗಿದ್ದೇನೆಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನು ಓದಿ : ಮೈಕ್ರೋ ಫೈನಾನ್ಸ್, ಮೀಟರ್ ಬಡ್ಡಿ ವ್ಯವಹಾರದ ವಿರುದ್ದ ದೇಶಪಾಂಡೆ ಗರಂ.

ಗೋವಾದಲ್ಲಿ ಏಪ್ರಿಲ್ ಆರಂಭದಿಂದ ಹೊಸ ಶೈಕ್ಷಣಿಕ ವರ್ಷ ಶುರು.

ಮನೆ ಕಳ್ಳತನ. ಠಾಣೆಯಲ್ಲಿ ದೂರು ದಾಖಲು.

ಕಾರವಾರದಲ್ಲಿ ತಂಜಿಮ್ ಪತ್ರಿಕಾಗೋಷ್ಠಿ. ಸಾಲ್ಕೋಡು ಗೋ ಹತ್ಯೆ ಘಟನೆಗೆ ಖಂಡನೆ.