ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹೊನ್ನಾವರ(Honnavar): ಯುವಕರು ಸಚಿವರಿಗೆ ಮಾಡಿದ ಮನವಿಯಂತೆ ಅವರ ಪುತ್ರಿ ಪುಟ್ಟ ಮಗುವಿನ ಕುಟುಂಬಕ್ಕೆ ನೆರವಾದ ಘಟನೆ ನಡೆದಿದೆ.

ಹೊನ್ನಾವರ(Honnavar) ತಾಲೂಕಿನ ಮಾವಿನಕುರ್ವೆ ಗ್ರಾಮದ (Mavinakurve Village) 6 ತಿಂಗಳ ಮಗುವಿನ ಚಿಕಿತ್ಸೆಗಾಗಿ ಹಣಕಾಸಿನ ಅಗತ್ಯವಾಗಿತ್ತು. ಸಚಿವ ಮಂಕಾಳ್‌ ವೈದ್ಯ(Mankal Vaidya) ಅವರ ಪುತ್ರಿ ಬೀನಾ ವೈದ್ಯ(Beena Vaidya) ಅವರು ಮನೆಗೆ ತೆರಳಿ 50 ಸಾವಿರ ಸಹಾಯ ಧನ ನೀಡುವ ಮೂಲಕ ಪುಟ್ಟ ಮಗುವಿನ ಕುಟುಂಬಕ್ಕೆ ನೆರವಾಗಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಗೆ(Heart Deacece) ಒಳಗಾಗಿದ್ದ ಆರು ತಿಂಗಳ ಮಗುವಿನ ಚಿಕಿತ್ಸೆ ನೆರವು ನೀಡುವಂತೆ ಸ್ಥಳೀಯ ಯುವಕರು ಸಚಿವ ಮಂಕಾಳ ವೈದ್ಯ ಅವರ ಗಮನಕ್ಕೆ ತಂದಿದ್ದರು. ಸಚಿವರು ಸಹಾಯ ಮಾಡುವುದಾಗಿ ಯುವಕರಿಗೆ ಭರವಸೆ ನೀಡಿದ್ದರು. ಸಚಿವರು ಕೊಟ್ಟ ಮಾತಿನಂತೆ ಅವರ ಪುತ್ರಿ ಬೀನಾ ವೈದ್ಯ ಅವರು ಮಗುವಿನ ಕುಟುಂಬದವರಿಗೆ ಸಹಾಯ ಮಾಡಿದ್ದಾರೆ.  ಅಲ್ಲದೆ ಆಸ್ಪತ್ರೆಯಲ್ಲಿನ ಬಿಲ್ ನೀಡುವಂತೆ ಕೇಳಿದ್ದು ಮುಂದಿನ ದಿನದಲ್ಲಿಯೂ ನಿಮ್ಮ ಜೊತೆ ನಾವಿದ್ದೇವೆ. ಧೈರ್ಯವಾಗಿ ಇರಿ, ಎಂದು ಮಗುವಿನ ಕುಟುಂಬಕ್ಕೆ ದೈರ್ಯ ತುಂಬಿದ್ದಾರೆ.

ಇದನ್ನು ಓದಿ : ಪರೀಕ್ಷೆಗೂ ಮುನ್ನ ಮೃತ ತಾಯಿಯ ಕಾಲಿಗೆ ಬಿದ್ದ ಮಗ. ಬಳಿಕ ಪರೀಕ್ಷೆಗೆ ಹಾಜರು.

ದೇವರ ಹುಂಡಿಯಲ್ಲಿ ಸಿಕ್ತು ಯುವತಿಯ ಪ್ರೇಮ ನಿವೇದನೆ ಪತ್ರ.

45 ದಿನಕ್ಕೆ 30ಕೋಟಿ ಆದಾಯ. ಮಹಾಕುಂಭ ಮೇಳದಿಂದ ನಾವಿಕ ಕುಟುಂಬ ಖುಷಿ.

ಅರಬ್ಬೀ ಸಮುದ್ರದಲ್ಲಿ ರಾತ್ರಿ ಎಂಟೆದೆ ಬಂಟ. ಬದುಕಿ ಬಂದದ್ದೇ ಪವಾಡ.