ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕೋಲಾರ(Kolar): ಯುವತಿಯೋರ್ವಳು ತಾನು ಪ್ರೀತಿಸುವ ಹುಡುಗ ನನ್ನನ್ನೇ ಪ್ರೀತಿ ಮಾಡಬೇಕು. ನಾವಿಬ್ಬರೂ ಒಂದಾಗಬೇಕು. ಎಂದು ದೇವರ ಹುಂಡಿಗೆ ಪ್ರೇಮ ಪತ್ರ (Love Letter) ಬರೆದು ಹಾಕಿದ್ದಾಳೆ.
ಕೋಲಾರ(Kolar) ಜಿಲ್ಲೆಯ ಮಾಲೂರು(Maluru) ತಾಲೂಕಿನ ಚಿಕ್ಕತಿರುಪತಿ ದೇವಾಲಯದ ಹುಂಡಿ ಎಣಿಕೆ ನಡೆಯುವಾಗ ಯುವತಿಯ ಕೋರಿಕೆಯ ಪ್ರೇಮ ಪತ್ರ(Love Letter) ಸಿಕ್ಕಿದೆ.
ಯುವತಿ ತಾನು ಬರೆದ ಪತ್ರದಲ್ಲಿ ನಾನು ಮತ್ತು ನನ್ನ ಪ್ರಿಯಕರ ಒಂದಾಗುವಂತೆ ಮಾಡು. ಅವನು ನನ್ನ ಬಿಟ್ಟು ಇರಲು ಆಗದಂತೆ ಮಾಡು, ನನ್ನ ಆಸೆ ಈಡೇರಿದರೇ ನಿನ್ನ ಸನ್ನಿಧಿಯಲ್ಲಿ ಮುಡಿ ಕೊಡುತ್ತೇನೆ” ಅಂತ ಪತ್ರದಲ್ಲಿ ಬರೆದಿದ್ದಾಳೆ.
ವೆಂಕಟರಮಣ ಸ್ವಾಮಿ, ತಿರುಪತಿ ತಿಮ್ಮಪ್ಪ, ನಾನು ನಿನ್ನ ಸನ್ನಿಧಿಗೆ ಬಂದು ಮುಡಿ ಕೊಡುತ್ತೇನೆ. ದಯವಿಟ್ಟು ಪ್ರದೀಪ್ ಮತ್ತು ನಾನು ಬೇಗ ಒಂದಾಗಬೇಕು. ಅವನು ನನ್ನನ್ನು ತುಂಬಾ ಇಷ್ಟ ಪಡಬೇಕು. ನನ್ನ ಬಿಟ್ಟು ಇರಲು ಆಗದಂತೆ ಮಾಡು. ಆಫೀಸ್ನಲ್ಲಿ ಮತ್ತು ಹೊರಗಡೆ ಎಲ್ಲರಿಗಿಂತ ನನ್ನನ್ನೆ ಆತ ಜಾಸ್ತಿ ಪ್ರೀತಿಸಬೇಕು. ಆದಷ್ಟು ಬೇಗ ನಾವಿಬ್ಬರೂ ಒಂದಾಗಬೇಕು. ಆಗ ಇಡೀ ಆಫೀಸ್ ನನ್ನ ಜೊತೆ ಆ ಬಗ್ಗೆ ಮಾತನಾಡಬೇಕು. ಆದಷ್ಟು ಬೇಗ ನನಗೆ ಏನು ಅವನ ಮೇಲೆ ಏನು ಫೀಲಿಂಗ್ ಇದಿಯೋ, ಅವನಿಗೂ ಅದಕ್ಕಿಂತ ಶೇ 7 ರಷ್ಟು ಜಾಸ್ತಿ ಪೀಲಿಂಗ್ಸ್ ಬರಬೇಕು ಹೀಗೆ ಯುವತಿ ಪತ್ರದಲ್ಲಿ ತನ್ನ ಪ್ರೇಮ ನಿವೇದನೆಯನ್ನು ದೇವರ ಮುಂದಿಟ್ಟಿದ್ದಾಳೆ.
ಇದನ್ನು ಓದಿ : 45 ದಿನಕ್ಕೆ 30ಕೋಟಿ ಆದಾಯ. ಮಹಾಕುಂಭ ಮೇಳದಿಂದ ನಾವಿಕ ಕುಟುಂಬ ಖುಷಿ.
ಅಪರಿಚಿತ ಮೃತದೇಹಕ್ಕೆ ಮುಕ್ತಿ ಕೊಡಿಸಿದ ಮುಟ್ಟಳ್ಳಿ ಮಂಜು, ಮಣ್ಕುಳಿ ವಿನಾಯಕ