ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಚೆನ್ನೈ(Chennai):  ದ್ವಿತೀಯ ಪಿಯುಸಿ(2nd PUC) ವಿದ್ಯಾರ್ಥಿಯೋರ್ವ ಪರೀಕ್ಷೆಗೆ ತೆರಳುವ ಮುನ್ನ  ಮೃತ ತಾಯಿಯ ಪಾದಕ್ಕೆ ಬಿದ್ದು ಆಶೀರ್ವಾದ ಪಡೆದು ಕೇಂದ್ರಕ್ಕೆ ತೆರಳಿದ ಹೃದಯವಿದ್ರಾವಕ ಘಟನೆ ತಮಿಳುನಾಡಿನಲ್ಲಿ(Tamilunadu) ನಡೆದಿದೆ.

ವಿದ್ಯಾರ್ಥಿ ತನ್ನ ತಾಯಿ ತೀರಿಕೊಂಡ ಕೆಲವೇ ಗಂಟೆಗಳ ನಂತರ ತನ್ನ ಬೋರ್ಡ್ ಪರೀಕ್ಷೆಗೆ(Board Exam) ಹಾಜರಾಗಿದ್ದಾನೆ. ನೋವಿನ ನಡುವೆಯೂ ಆತನಿಗೆ ತಾಯಿಯ ಕನಸು ನೆನಪಿಸಿ ಪರೀಕ್ಷೆ ಬರೆದಿದ್ದಾನೆ. ಹೊರಡುವ ಮೊದಲು ಆತ ತನ್ನ ಹಾಲ್ ಟಿಕೆಟ್(Hall Ticket) ಅನ್ನು ಆಕೆಯ ಪಾದಗಳ ಬಳಿ ಇಟ್ಟು, ಪ್ರಾರ್ಥಿಸಿ ಆಕೆಯ ಕೊನೆಯ ಆಸೆ ಈಡೇರಿಸುತ್ತೇನೆ ಎಂದು ಶಪಥ ಮಾಡಿದ್ದಾನೆ.

ತಿರುನಲ್ವೇಲಿ ಜಿಲ್ಲೆಯ ವಲ್ಲಿಯೂರಿನ ವಿದ್ಯಾರ್ಥಿ ಸುನೀಲ್ ಕುಮಾರ್ ತಾಯಿ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು.  ಮಾರ್ಚ್ 3 ರಂದು ಆತನ ತಾಯಿ ಸುಭಾ ಲಕ್ಷ್ಮಿ ಹೃದಯಾಘಾತದಿಂದ ತೀರಿ ಹೋಗಿದ್ದರು.  ತಂದೆ ಕೃಷ್ಣಮೂರ್ತಿ ಆರು ವರ್ಷಗಳ ಹಿಂದೆ ನಿಧನರಾಗಿದ್ದರು. ಸುಭಾಲಕ್ಷ್ಮಿಯೇ ಪುತ್ರ ಸುನೀಲ್ ಮತ್ತು ಪುತ್ರಿ ಯಾಸಿನಿಯನ್ನು ಬೆಳೆಸುತ್ತಿದ್ದರು.

ಸುನಿಲ್ ಸಂಬಂಧಿಕರು ಮತ್ತು ನೆರೆಹೊರೆಯವರು ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು, ತನ್ನ ಮಕ್ಕಳಿಗೆ ಶಿಕ್ಷಣ ನೀಡುವ ತಾಯಿಯ ದೃಢಸಂಕಲ್ಪವನ್ನು ನೆನಪಿಸಿಕೊಂಡರು. ಹೊರಡುವ ಮೊದಲು, ಭಾವುಕರಾದ ಸುನಿಲ್ ತನ್ನ ಹಾಲ್ ಟಿಕೆಟ್ ಅನ್ನು ತನ್ನ ತಾಯಿಯ ಪಾದಗಳ ಬಳಿ ಇಟ್ಟು ಕಣ್ಣೀರು ಸುರಿಸುತ್ತಾ ಅಳಲು ಪ್ರಾರಂಭಿಸಿದ. ಅವನ ಕುಟುಂಬ ಸದಸ್ಯರು ಅವನನ್ನು ಸಮಾಧಾನಪಡಿಸಿ ತಾಯಿಯ ಕನಸು ನನಸು ಮಾಡುವಂತೆ ತಿಳಿಸಿದರು.

ಬಳಿಕ ಆತನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ. ಈ ವಿಚಾರವಾಗಿ ರಾಜ್ಯ ಶಿಕ್ಷಣ ಸಚಿವ ಅನ್ಸಿಲ್ ಮಹೇಶ್ ಅವರ ತಂಡವು ಸುನಿಲ್ ಅವರೊಂದಿಗೆ ಮಾತನಾಡಿ, “ನಾನು ಸಹೋದರನಂತೆ, ಸಚಿವನಾಗಿಯೂ ಅವರೊಂದಿಗೆ ಇರುತ್ತೇನೆ. ಅಗತ್ಯವಿರುವ ಎಲ್ಲಾ ಸಹಾಯವನ್ನು ಮಾಡುತ್ತೇವೆ. ಅವರಿಗೆ ಭರವಸೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್(M K Stalin) ಅವರು ಎಕ್ಸ್ ನಲ್ಲಿ ಈ ಘಟನೆಯ ಬಗ್ಗೆ ಪೋಸ್ಟ್ ಹಂಚಿಕೊಂಡರು ಮತ್ತು “ಇದು ತಮಿಳು ಸಮುದಾಯ! ಶಿಕ್ಷಣ ನಮ್ಮ ಜೀವಕ್ಕಿಂತ ಮುಖ್ಯ!” ಎಂದು ಬರೆದಿದ್ದಾರೆ.

ತಮಿಳುನಾಡು ಹೈಯರ್ ಸೆಕೆಂಡರಿ ಸರ್ಟಿಫಿಕೇಟ್ ಪರೀಕ್ಷೆ ಮಾರ್ಚ್ 3 ರಿಂದ ಮಾರ್ಚ್ 25 ರವರೆಗೆ ನಡೆಯಲಿದ್ದು, 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ.

ಇದನ್ನು ಓದಿ : ದೇವರ ಹುಂಡಿಯಲ್ಲಿ ಸಿಕ್ತು ಯುವತಿಯ ಪ್ರೇಮ ನಿವೇದನೆ ಪತ್ರ

45 ದಿನಕ್ಕೆ 30ಕೋಟಿ ಆದಾಯ. ಮಹಾಕುಂಭ ಮೇಳದಿಂದ ನಾವಿಕ ಕುಟುಂಬ ಖುಷಿ.

ಅರಬ್ಬೀ ಸಮುದ್ರದಲ್ಲಿ ರಾತ್ರಿ ಎಂಟೆದೆ ಬಂಟ. ಬದುಕಿ ಬಂದದ್ದೇ ಪವಾಡ