ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಕರ್ತವ್ಯ ಮುಗಿಸಿ ಬೈಕ್ ನಲ್ಲಿ  ತೆರಳುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ(Accident)  ಬಿದ್ದು ರೈಲ್ವೆ ಸಿಬ್ಬಂದಿಯೋರ್ವ ಸಾವನ್ನಪ್ಪಿದ ಘಟನೆ  ನಡೆದಿದೆ.

ಮೃತಪಟ್ಟ ವ್ಯಕ್ತಿ ಸಂಜಯಕುಮಾರ  ಗಣಪಯ್ಯ ಶೇರುಗಾರ (52) ಮೃತ ದುರ್ದೈವಿ. ಇವರು ಬೈಂದೂರು ಬಾಡ(Byanduru Baada) ನಿವಾಸಿಯಾಗಿದ್ದಾರೆ.

ಸಂಜಯಕುಮಾರ್ ಕೊಂಕಣ ರೈಲ್ವೆಯಲ್ಲಿ(Konkan Railway) ಇಂಜಿನಿಯರಿಂಗ್ ವಿಭಾಗದಲ್ಲಿ ಟ್ರಾಕ್‌ಮ್ಯಾನ್(Trackman) ಕಾರ್ಯನಿರ್ವಹಿಸುತ್ತಿದ್ದು ಇವರು ರಾತ್ರಿ  ಡ್ಯೂಟಿ ಮುಗಿಸಿ  ಭಟ್ಕಳದಿಂದ ಬೈಂದೂರು(Bhatkal to Bainduru) ಕಡೆಗೆ ತಮ್ಮ ಬೈಕ್ ಮೇಲೆ ತೆರಳುವ ಸಂದರ್ಭದಲ್ಲಿ ಇಲ್ಲಿನ ಬೆಳಕೆ ಸೊಸೈಟಿಯ(Belke Society) ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಆಕಸ್ಮಿಕವಾಗಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಗಟಾರಲ್ಲಿ ಬಿದ್ದು   ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ  ಭಟ್ಕಳ ಗ್ರಾಮೀಣ ಠಾಣೆಯಲ್ಲಿ(Bhatkal Rural Station) ದೂರು ದಾಖಲಾಗಿದ್ದು ತನಿಖೆ ನಡೆಸಲಾಗಿದೆ.
ಇದನ್ನು ಓದಿ : ಮಿಡಿವ ಹೃದಯಕ್ಕೆ ನೆರವಾದ ಸಚಿವರ ಪುತ್ರಿ ಬೀನಾ ವೈದ್ಯ

ಪರೀಕ್ಷೆಗೂ ಮುನ್ನ ಮೃತ ತಾಯಿಯ ಕಾಲಿಗೆ ಬಿದ್ದ ಮಗ. ಬಳಿಕ ಪರೀಕ್ಷೆಗೆ ಹಾಜರು.

ದೇವರ ಹುಂಡಿಯಲ್ಲಿ ಸಿಕ್ತು ಯುವತಿಯ ಪ್ರೇಮ ನಿವೇದನೆ ಪತ್ರ.