ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡೆ ಮದ್ಯ ಸಾಗಾಟಕ್ಕೆ ಸಹಕರಿಸಿದ ಹಳಿಯಾಳ  ಠಾಣೆಯ (Haliyal Station) ಪೊಲೀಸ್ ಕಾನ್ಸಟೇಬಲ್ ಸಂತೋಷ ಲಮಾಣಿಯನ್ನು ಇಲಾಖಾ ವಿಚಾರಣೆಗೆ ಬಾಕಿಯಿಟ್ಟು ಕರ್ತವ್ಯದಿಂದ ಅಮಾನತ್ ಗೊಳಿಸಿ(Sudpend) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಆದೇಶಿಸಿದ್ದಾರೆ.

ಸಂತೋಷ್ ಲಮಾಣಿ ಸರಿಯಾಗಿ ಕರ್ತವ್ಯ ನಿರ್ವಹಿಸದೇ ಮದ್ಯ  ಸಾಗಾಟ ಮತ್ತು ಸಹಕರಿಸಿದ್ದಾರೆಂಬ ಆರೋಪ  ಎದುರಿಸುತ್ತಿದ್ದಾರೆ‌ . ಇವರು ಹಿಂದೆ‌ ಕದ್ರಾ ಠಾಣೆಯಲ್ಲಿ(Kadra Station) ಕೆಲಸ ಮಾಡುವಾಗ, ಗೋವಾದಿಂದ ಅಕ್ರಮವಾಗಿ ಸಾರಾಯಿಯನ್ನ(Goa Illegal Liquor)  ಗೋಕರ್ಣಕ್ಕೆ ಸರಬರಾಜು(Gokarn Supply) ಮಾಡುವಾಗ ಸಿಕ್ಕಿಬಿದ್ದಿದ್ದರು. ಈಗ ಮತ್ತೆ ಅಂಕೋಲಾ ಟೋಲ್ ಗೇಟ್(Ankola Tollgate) ಸಮೀಪ ಸಿಕ್ಕಿ ಬಿದ್ದಿದ್ದಾರೆ.

ಗೋವಾದಿಂದ ಮಂಡ್ಯ (Goa To Mandya) ಪಾಂಡವಪುರಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಯತ್ನದಲ್ಲಿ ಗುರುವಾರ ಇಬ್ಬರು  ಸಿಕ್ಕಿ ಬಿದ್ದಿದ್ದರು. ಅಂಕೋಲಾ ಪೊಲೀಸರು(Ankola Police) ಕಾರು ಸಮೇತ. 80 ಸಾವಿರಕ್ಕೂ ಹೆಚ್ಚು ಬೆಲೆಯ ರಾಯಲ್ ಸ್ಟಾಗ್ ವಿಸ್ಕಿ(Royal Stag Whisky), ಮೆನ್ಸನ್ ಹೌಸ್ ಬ್ರಾಂಡಿ ಇರುವ ಬಾಟಲ್ ವಶಕ್ಕೆ ಪಡೆದಿದ್ದರು. ಮಂಡ್ಯಾ ಖ್ಯಾತನಹಳ್ಳಿಯ ದಿವಾಕರ , ಪಾಂಡವಪುರದ ಮಾದೇವ ಕೃಷ್ಣ ಎಂಬುವವರನ್ನು ಬಂಧಿಸಿದ್ದರು.‌ ಒಬ್ಬ ಬುಲೆಟ್ ನಲ್ಲಿ(Bullet) ತೆರಳಿ ತಪ್ಪಿಸಿಕೊಂಡಿದ್ದ. ಆತ ಹಳಿಯಾಳ ಪೊಲೀಸ್ ಠಾಣೆಯ(Haliyal Police Station) ಸಿಬ್ಬಂದಿ ಸಂತೋಷ ಲಮಾಣಿ ಎಂದು ಗೊತ್ತಾಗಿದೆ.‌ ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್ ಪೇದೆ ಸಂತೋಷ ಲಮಾಣಿಯನ್ನು ಅಮಾನತ್ ಮಾಡಿ ಎಸ್ಪಿ ನಾರಾಯಣ(SP Narayan) ಆದೇಶ ಹೊರಡಿಸಿದ್ದಾರೆ.

ಇದನ್ನು ಓದಿ : ಚಾಲಕನ ನಿಯಂತ್ರಣ ತಪ್ಪಿ ಟೈಲರ್, ಬಟ್ಟೆ ಅಂಗಡಿಗೆ ನುಗ್ಗಿದ ಲಾರಿ

ದಾರಿ ಜಗಳದಲ್ಲಿ ಮಹಿಳೆ ಮೇಲೆ ಕತ್ತಿ ಬೀಸಿದ ಇಬ್ಬರಿಗೆ ಶಿಕ್ಷೆ.

ಆರಿತು 46 ವರ್ಷ ಬೆಳಗಿದ ಚಿಗಳ್ಳಿ ದೀಪ ! ಕಾದಿದೆಯಾ ಕಂಠಕ.

ಫೆ. 16 ರಂದು ಸಿದ್ದಾಪುರದಲ್ಲಿ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ