ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಸಿದ್ದಾಪುರ (Siddapura): ಮನೆಯ ಅಂಗಳದಲ್ಲಿ ಶೇಖರಿಸಿಟ್ಟಿದ್ದ ಅಡಿಕೆ ಚೀಲಗಳನ್ನ(Arecnut Bag) ಕದ್ದ ಆರೋಪಿಯನ್ನ ಸಿದ್ದಾಪುರ ಪೋಲೀಸರು(Siddapur Police) ಬಂಧಿಸಿದ್ದಾರೆ.
ಕೊಲಶಿರ್ಸಿ(Kolasirsi) ಗುಡ್ಡಕೇರಿಯ ಕಾಶಿನಾಥ ಕೃಷ್ಣ ನಾಯ್ಕ (34) ಬಂಧಿತ ವ್ಯಕ್ತಿ. ಫೆಬ್ರವರಿ ಐದರಂದು ರಾತ್ರಿ ವೇಳೆ ಮಾರುತಿ ನಗರದ ನಾಗರಾಜ ಗೌಡರ ಎಂಬುವವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಚೀಲ(Arecnut Bag) ಕದ್ದು ಪರಾರಿಯಾಗಿದ್ದರು. ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಟ್ಟಿದ್ದ ಒಣಗಿದ ಸಿಪ್ಪೆಗೋಟಿನ ಆರು ಅಡಿಕೆ ಚೀಲಗಳ ಪೈಕಿ ಮೂರು ಒಣ ಸಿಪ್ಪೆಗೋಟಿನ ಅಡಿಕೆ ಚೀಲಗಳನ್ನು ಕಳ್ಳರು ಕದ್ದು ಹೋದ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ (Siddapura Station) ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕಳ್ಳತನ ಮಾಡಿದ ಆರೋಪಿಯನ್ನ ಬಂಧಿಸಿ ಒಟ್ಟೂ ಅಂದಾಜು 25,000/-ರೂ. ಮೌಲ್ಯದ 8 ಅಡಿಕೆ ಚೀಲವನ್ನು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ನ್ನ ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ : ದೆಹಲಿಯಲ್ಲಿ ಬಿಜೆಪಿಗೆ ಗದ್ದುಗೆ. ಆಪ್ ಮನೆಗೆ. ಕಾಂಗ್ರೆಸ್ ಮತ್ತೆ ಸೋಲಿಗೆ.
ರಸ್ತೆಯಲ್ಲಿ ನಿಂತು ದರೋಡೆಗೆ ಇಳಿದ ಗ್ಯಾಂಗ್ ಆರೆಸ್ಟ್.
ಕಳ್ಳಾಟದಿಂದ ಇಲಾಖೆ ಮರ್ಯಾದೆ ಕಳೆಯುತ್ತಿದ್ದ ಪೊಲೀಸ್ ಸಸ್ಪೆಂಡ್.