ಸಿದ್ದಾಪುರ(Siddapura) : ಅಯ್ಯಪ್ಪ ಭಕ್ತರ(ayyappa devotees) ಜಾತ್ರೆಯ ಕಾರೊಂದು ನುಗ್ಗಿ (Car Accident) ಭಕ್ತರೊಬ್ಬರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ಸಿದ್ದಾಪುರದ ರವೀಂದ್ರನಗರದಲ್ಲಿ (Siddapura Ravindranagara) ನಡೆದಿದೆ.

ದುರ್ಘಟನೆಯಲ್ಲಿ ಓರ್ವ ಯುವತಿ ಸಾವನ್ನಪ್ಪಿದ್ದು , ಎಂಟು ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ಸಿದ್ಧಾಪುರ ತಾಲೂಕಿನ ಕೋಲಸಿರ್ಸಿಯ(Kolasirsi)  ದೀಪಾ ರಾಮ ಗೊಂಡ (21) ಮೃತ ಯುವತಿಯಾಗಿದ್ದಾಳೆ. ಕಲ್ಪನಾ, ಜಾನಕಿ, ಚೈತ್ರಾ, ಜ್ಯೋತಿ, ಮಾದೇವಿ, ಗೌರಿ, ರಾಮಪ್ಪ ಹಾಗೂ ಗಜಾನನ ಎಂಬುವವರಿಗೆ ಗಂಭೀರ ಗಾಯವಾಗಿದೆ.

ಗಾಯಗೊಂಡವರಿಗೆ ಸಿದ್ಧಾಪುರ ತಾಲೂಕು(Siddapura Taluku) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ  ಕಲ್ಪನಾ  ಹಾಗೂ ಇನ್ನೋರ್ವ ಮಹಿಳೆಯನ್ನು ಶಿವಮೊಗ್ಗ(shivamogga) ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮಕರ ಸಂಕ್ರಮಣ(Makara samkramana) ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿ(Ayyappa Swami) ಮಂದಿರದ ಸಮೀಪ ಜಾತ್ರೆ ನಡೆಯುತ್ತಿತ್ತು. ಜಾತ್ರೆಯಲ್ಲಿ ನೂರಾರು ಜನ ಸೇರಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಕಾರು ಚಾಲಕ ಭಕ್ತರ ಮೇಲೆ ಕಾರನ್ನ ಹರಿಸಿದ್ದಾನೆ. ರೋಶನ್ ಫರ್ನಾಂಡೀಸ್ ಎಂಬಾತ ಅತೀ ವೇಗದಲ್ಲಿ ತನ್ನ ಇಕೋ ಸ್ಪೋರ್ಟ್ ಕಾರನ್ನು(Eco Sportz Car)  ಚಲಾಯಿಸಿದ್ದರಿಂದ ಈ ಅಪಘಾತ ನಡೆದಿದೆ.

ಆಕ್ರೋಶಗೊಂಡ ಭಕ್ತಾದಿಗಳು ಆರೋಪಿಯ ಕಾರಿನ ಗಾಜು ,  ಪುಡಿಪುಡಿ ಮಾಡಿದ್ದಾರೆ.ಬಳಿಕ ಆರೋಪಿಯನ್ನ ಹರಸಾಹಸಪಟ್ಟು  ಠಾಣೆಗೆ ಎಳೆದೊಯ್ದ ಪೊಲೀಸರಿಗೆ ನೀಡಿದ್ದಾರೆ. ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ(Siddapura Police Station) ಆರೋಪಿ ರೋಶನ್ ಫೆರ್ನಾಂಡೀಸ್ ವಿರುದ್ಧ ಪ್ರಕರಣ ದಾಖಲಾಗಿದೆ

ಇದನ್ನು ಓದಿ : ಭಕ್ತ ಸಾಗರ ನಡುವೆ ಅಳ್ವೆಕೋಡಿ  ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ.

ಸಂಸದರ ಮನೆಯ ಬಳಿ ಹೊಂಚು ಹಾಕಿದ ರಣಬೇಟೆಗಾರ.

ತಿರುಪತಿಯ ಲಡ್ಡು ಪ್ರಸಾದ  ಕೌಂಟರ್‌ನಲ್ಲಿ  ಅಗ್ನಿ ಅವಘಡ.