ಕಾರವಾರ: ಮಾತಾ ಅಮೃತಾಮಯಿ ಶಿಕ್ಷಣ ಸಂಸ್ಥೆಯ ಅಮೃತ ವಿದ್ಯಾಲಯಂನ ಬಾಲವಟಿಕ  ಕೇಂದ್ರ ಕಾರವಾರದಲ್ಲಿ ಶುಭಾರಂಭಗೊಂಡಿದೆ.

ನಗರದ ಹಬ್ಬುವಾಡ ರಸ್ತೆ ಪಕ್ಕದಲ್ಲಿರುವ ವರ್ಚುವಲ್ ಪ್ಯಾರಾಡೈಸ್ ಕಟ್ಟಡದಲ್ಲಿ ಆರಂಭಿಸಲಾದ ನೂತನ ಶಾಲೆಯನ್ನ  ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ವಿದ್ಯುಕ್ತವಾಗಿ ಉದ್ಘಾಟಿಸಿದರು‌.

ಉದ್ಘಾಟನೆ ನೆರವೇರಿಸ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾತಾ ಅಮೃತಮಯಿ ಅವರ ಬಗ್ಗೆ ತಿಳಿದುಕೊಂಡಿದ್ದೇನೆ. ಶಿಕ್ಷಣದಲ್ಲಿ ಅವರ ಕೊಡುಗೆ ಅಪಾರ, ಅನಾಥರಿಗೆ ತಾಯಿಯಾಗಿ ಹಲವು ಅನಾಥಾಶ್ರಮ ನಡೆಸುತ್ತಿದ್ದಾರೆ. ಮಕ್ಕಳು ಶಿಕ್ಷಣ ಪಡೆದರೆ ದೇಶದ ಪ್ರಗತಿ ಕೂಡ ಸಾಧ್ಯ ಎಂದ ಅವರು ಉತ್ತಮ ಸಂಸ್ಕಾರವನ್ನ ಅಮೃತಾನಂದಮಯಿ ಸಂಸ್ಥೆಯಿಂದ ಕೊಡಲಾಗುತ್ತಿದೆ. ಸಂಸ್ಕಾರ ಶಿಕ್ಷಣದಷ್ಟೇ ಮಹತ್ವ. ನಾವು ಎಷ್ಟು ಓದಿದ್ದೇವೆ, ಸಂಸ್ಕಾರ ಎಷ್ಟಿದೆ ಎನ್ನುವುದು ಲೆಕ್ಕ ಹಾಕಲಾಗುತ್ತದೆ. ಜಿಲ್ಲಾಡಳಿತದಿಂದ ಶಿಕ್ಷಣಕ್ಕೆ ಸದಾ ಕಾಲ ಬೆಂಬಲ ಇರುತ್ತದೆ. ಶಾಲೆ ಇನ್ನಷ್ಟು ಬೆಳೆಯಲಿ ಎಂದರು.

ಇದೇ ಸಂದರ್ಭದಲ್ಲಿ ಪೊಷಕರ ಸಮ್ಮುಖದಲ್ಲಿ ಅಕ್ಷರಾಭ್ಯಾಸ ಮಾಡಿಸಲಾಯಿತು. ಪೂಜಾ ಕಾರ್ಯದ ನಂತರ ವಿದ್ಯಾರ್ಥಿಗಳಿಗೆ ತರಗತಿಯನ್ನ ಪ್ರಾರಂಭಿಸಲಾಯಿತು.

ಕಾರ್ಯಕ್ರಮದಲ್ಲಿ ಅಮೃತ ವಿದ್ಯಾಲಯಂ ಪ್ರಾಂಶುಪಾಲರಾದ ಅಮಲಾಮೃತ ಸ್ವಾಮಿನಿ, ಉಪ ಪ್ರಾಂಶುಪಾಲರಾದ ಡಾ. ವಿದ್ಯಾ ನಾಯ್ಕ, ಸಿಬ್ಬಂದಿ ದತ್ತಪ್ರಸಾದ್ ಸೇರಿದಂತೆ ಶಾಲಾ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.