ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್ ಸೃಷ್ಟಿಸಿದ ರುದ್ರಾಕ್ಷಿ ಮಾರುವ ಹುಡುಗಿಗೆ ಅದೃಷ್ಟ ಖುಲಾಯಿಸುತ್ತಲೇ ಇದೆ. ಆಕೆಯ ಜನಪ್ರಿಯತೆ  ಜೀವನವನ್ನ ಬದಲಾಯಿಸುತ್ತಿದೆ. ಕೇರಳದ ಪ್ರಖ್ಯಾತ ಚಿನ್ನಾಭರಣ ಮಳಿಗೆಯ  ಬ್ರಾಂಡ್ ಅಂಬಾಸಿಡ‌ರ್ ಆಗಿ ಮೊನಾಲಿಸಾ(Monalisa) ಆಯ್ಕೆಯಾಗಿದ್ದಾರೆ.

ಈಗಾಗಲೇ ಬಾಲಿವುಡ್ ಸಿನಿಮಾದಲ್ಲಿ(Bollywood Cinema) ನಟಿಸಲು ಮೊನಾಲಿಸಾಗೆ ಅವಕಾಶ ಸಿಕ್ಕಾಗಿದೆ. ಇದಕ್ಕೂ ಮುನ್ನ  ಈಕೆ ಜ್ಯುವೆಲ್ಲರಿ ಬ್ರಾಂಡ್‌ನ ಅಂಬಾಸಿಡರ್(Brand Ambasider) ಆಗಿ ಕಾಣಿಸಿಕೊಳ್ಳಲಿದ್ದಾರೆ.

ಎಲ್ಲೋ ಇದ್ದವರನ್ನ ಮತ್ತೆಲ್ಲಿಯೋ ತಲುಪಿಸಿಬಿಡೋಕೆ  ಮಹಾಕುಂಭಮೇಳದ  (Mahakumbha mela)  ಮೊನಾಲಿಸಾ ಸಾಕ್ಷಿ.  ಅಲೆಮಾರಿ ಜನಾಂಗದ ಬೆಕ್ಕಿನ ಕಣ್ಣಿನ ಸಹಜ ಸುಂದರಿ 16ರ ಹರೆಯದ ಮೊನಾಲಿಸಾ ಯೂಟ್ಯೂಬರ್‌ಗಳ(Monalisa Youtuber) ಕಣ್ಣಿಗೆ ಬಿದ್ದು ರಾತ್ರಿ ಬೆಳಗಾಗೊದರೊಳಗೆ ಸೋಷಿಯಲ್‌ ಮೀಡಿಯಾ ಸೆನ್ಸೆಷನ್ ಆಗಿದ್ದಾಳೆ. ಕೇರಳದ (Keral) ಪ್ರಸಿದ್ಧ ಚೆಮ್ಮನೂರ್ ಜ್ಯುವೆಲ್ಲರಿ(Chemmanuru Jewellary) ತನ್ನ ಪ್ರಚಾರಕ್ಕೆ ಮೊನಾಲಿಸಾಳನ್ನು ರಾಯಭಾರಿ ಮಾಡಿಕೊಳ್ಳಲು ನಿರ್ಧರಿಸಿದೆ. ಮೊನಾಲಿಸಾ ಕೇರಳದ ಕಲ್ಲಿಕೋಟೆಗೆ(Keral kallikote) ಆಗಮಿಸಲಿದ ಬಳಿಕ  ಕಂಪನಿಯ ಪ್ರಚಾರ ರಾಯಭಾರಿಯಾಗಿ ಘೋಷಿಸಲಾಗುತ್ತದೆ. ಅವರಿಗೆ 15 ಲಕ್ಷ ರೂ. ಸಂಭಾವನೆ ನೀಡಲಾಗುವುದು ಎಂದು ಈ ಬಗ್ಗೆ ಮಾಲೀಕ ಬಾಬಿ ಚೆಮ್ಮನೂ‌ರ್ ಹೇಳಿದ್ದಾರೆ. ಇದೇ ವೇಳೆ ಮೊನಾಲಿಸಾ ತಮ್ಮ ಚೊಚ್ಚಲ ಬಾಲಿವುಡ್ ಚಿತ್ರಕ್ಕಾಗಿ 21 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. 1 ಲಕ್ಷ ರೂ.ಮುಂಗಡವಾಗಿ ಪಡೆದಿದ್ದಾರೆ. ತಮ್ಮ ಜೀವನವನ್ನು ಬದಲಾಯಿಸುವ ಅವಕಾಶದ ಬಗ್ಗೆ ಮೊನಾಲಿಸಾ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಶಿವ ಮತ್ತು ಸಂತರ ಆಶೀರ್ವಾದದಿಂದ ನಾನು ಜನಪ್ರಿಯತೆಯನ್ನು ಗಳಿಸಿದ್ದೇನೆ. ನಾನು ನಿಮ್ಮೆಲ್ಲರಿಗೂ ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ಈ ಕಾರಣದಿಂದಾಗಿ, ನನಗೆ ಬಾಲಿವುಡ್ ಚಿತ್ರವೊಂದರ ಆಫರ್ ಬಂದಿದೆ. ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ(Sanoj Mishra) ಅವರು ವೈಯಕ್ತಿಕವಾಗಿ ನನ್ನ ಮನೆಗೆ ಭೇಟಿ ನೀಡಿ ಈ ಅವಕಾಶವನ್ನು ನೀಡಿದ್ದಾರೆ. ನಾನು ಯಾವಾಗಲೂ ನಾಯಕಿಯಾಗುವ ಕನಸು ಕಂಡಿದ್ದೆ. ಇಂದು ಆ ಕನಸು ನನಸಾಗಿದೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಮೊನಾಲಿಸಾ ಬೊಂಸ್ಲೆ ಹೇಳಿದ್ದಾರೆ.

ಇದನ್ನು ಓದಿ : ಮದ್ಯದ ಬಾಟಲಿ ಮೇಲೆ ಗಾಂಧೀಜಿ ಭಾವ ಚಿತ್ರ. ವ್ಯಾಪಕ ಆಕ್ರೋಶ

ಜಲಪಾತದಲ್ಲಿ ಮುಳುಗಿ ಇಬ್ಬರು ಬಾಲಕರು ನಾಪತ್ತೆ.

ಕಾರವಾರದಲ್ಲಿ ಲೋಕಾಯುಕ್ತ ದಾಳಿ.ನಗರ ಯೋಜಕ ಸದಸ್ಯ ಬಲೆಗೆ

ತೆರವುಗೊಳಿಸುವ ವೇಳೆ ಎದ್ದು ನಿಂತ ಕಾಳಿ ಸೇತುವೆಯ ಸ್ಲ