ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಸಿದ್ದಾಪುರ(Siddapura) : ಸ್ಥಳೀಯ ಆಧಾರ ಸಂಸ್ಥೆ(Adhar Samsthe) (ರಿ.) ಆಶ್ರಯದಲ್ಲಿ ಮಂಗಳೂರು ಹಾರ್ಟ್ ಸ್ಕ್ಯಾನ್  ಫೌಂಡೇಷನ್ (Manglore Heart Scan Foundation) ಹಾಗೂ ಒಮೇಗಾ ಹಾಸ್ಪಿಟಲ್(Omega Hospital) ಇವರ ಆಶ್ರಯದಲ್ಲಿ ಫ್ರೆ. 16 ರಂದು ಪಟ್ಟಣದ ಎಂ.ಎಚ್.ಪಿ.ಎಸ್. ಬಾಲಿಕೊಪ್ಪಾದಲ್ಲಿ ದಿ||ಡಿ.ಎನ್. ಶೇಟ್ ಸ್ಮರಣಾರ್ಥ ಬೃಹತ್ ಉಚಿತ ಹೃದಯ ತಪಾಸಣ ಶಿಬಿರ(Free Heart Camp) ಆಯೋಜಿಸಲಾಗಿದೆ.

ಹಲವು ವರ್ಷಗಳ ನಂತರ ತಾಲೂಕಿನಲ್ಲಿ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ ನಡೆಯುತ್ತಿದೆ.  ಖ್ಯಾತ ಹೃದಯರೋಗ ತಜ್ಞ ಡಾ|| ಕೆ. ಮುಕುಂದ, ಡಾ|| ಅಮಿತ್ ಕಿರಣ ಹಾಗೂ ಡಾ|| ಮೇಘನಾ ಮುಕುಂದ ಅವರು ಶಿಬಿರದಲ್ಲಿ ಪಾಲ್ಗೊಂಡು ಹೃದಯ ತಪಾಸಣೆ ನಡೆಸಲಿದ್ದಾರೆ.

ಶಿಬಿರದಲ್ಲಿ ಹೃದಯರೋಗ ತಪಾಸಣೆ ಹಾಗೂ ಸಾಮಾನ್ಯ ವೈದ್ಯಕೀಯ ತಪಾಸಣೆ, ಇ.ಸಿ.ಜಿ. ಹಾಗೂ ಇ.ಸಿ.ಎಚ್.ಒ. ಪರೀಕ್ಷೆ ನಡೆಸಲಾಗುವುದು. ಅಲ್ಲವೇ ಮದುಮೇಹ ರಕ್ತ ಪರೀಕ್ಷೆ ನಡೆಸಲಾಗುವುದು.

ತಪಾಸಣೆ ಶಿಬಿರದಲ್ಲಿ ಭಾಗವಹಿಸುವವರು  ಬರುವಾಗ ಈ ಹಿಂದೆ ತಪಾಸಣೆ ಮಾಡಿದ್ದರೆ ಇತ್ತೀಚಿಗೆ ನಡೆಸಲಾದ ವೈದ್ಯಕೀಯಾ ತಪಾಸಣಾ ದಾಖಲೆಗಳನ್ನು ಹಾಗೂ ನೀಡಲಾದ ಔಷಧಿಗಳ ಮಾಹಿತಿಯನ್ನು ತರುವುದು ಕಡ್ಡಾಯವಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳಲು ಫೇ. 15 ರೊಳಗೆ ಹೆಸರನ್ನು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬೇಕು. ನಾಗರಾಜ ನಾಯ್ಕ ಮಾಳ್ಕೋಡ (8105406513), ಪ್ರಶಾಂತ ಡಿ. ಶೇಟ್ (9448347570), ಧರ್ಮ ಅಂಬಿಗ (8867144092), ಸುರೇಶ ಮಡಿವಾಳ ಕಡಕೇರಿ (9945774548).

ತಪಾಸಣಾ ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನಡೆಯಲಿದ್ದು ಸಾರ್ವಜನಿಕರು, ಆಸಕ್ತರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಹಾಗೂ ಶಿಬಿರದ ಸಂಯೋಜಕ ಧರ್ಮ ಅಂಬಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : ಜಾತ್ರೆ ಸಂದರ್ಭದಲ್ಲಿ ಪೊಲೀಸ್ ದಾಳಿ. ಆರು ಎಲೆ ಮಾನವರ ಬಂಧನ.

ಇನ್ಮುಂದೆ ಶನಿವಾರ ಅರ್ಧ ದಿನ ಶಾಲೆ.

ಅಕ್ರಮ ಮದ್ಯ ದಂದೆಯ ಪೊಲೀಸಪ್ಪನಿಂದ ಮತ್ತೆ ಅದೇ ಚಾಳಿ. ಆಗ ಗೋಕರ್ಣ ಈಗ ಅಂಕೋಲಾ.

ಹೈ ಹೀಲ್ಸ್ ಕೊಡಿಸದ ಪತಿಯ  ವಿರುದ್ಧ ಪತ್ನಿ ದೂರು.

ಫೆ.13ಕ್ಕೆ ಉಳವಿ ಮಹಾರಥೋತ್ಸವ. ಭಕ್ತರ ಗಮನಕ್ಕೆ.