ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ (Honnavara) : ತಾಲೂಕಿನ ಹೊಸಾಕುಳಿ ಜಾತ್ರೆ ಸಂದರ್ಭದಲ್ಲಿ ಇಸ್ಪೀಟ್ ಆಡುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ (Police Raid) ನಡೆಸಿ ಆರು ಜನರನ್ನ  ಬಂಧಿಸಲಾಗಿದೆ.

ಕೃಷ್ಣ ಸುಬ್ರಾಯ ಹೆಗಡೆ ಹೊಸಾಕುಳಿ(Hosakuli) ಸಾಣ್ಮನೆ, ಪ್ರವೀಣ ನಾಗೇಶ ನಾಯ್ಕ ಹೊಸಾಕುಳಿ ತಗಟಕೇರಿ,  ರಮೇಶ ಮಾರು ಮುಕ್ರಿ ಹೊಳೆಗದ್ದೆ(Holegadde),  ರವಿ ಶಂಭು ಹೆಗಡೆ ಹೊಸಾಕುಳಿ ಸಾಣ್ಮನೆ,  ಸುಬ್ರಹ್ಮಣ್ಯ ಹಮ್ಮು ಗೌಡ ಹೊಸಾಕುಳಿ,  ವಿನಯ ಬಾಲಕೃಷ್ಣ ನಾಯ್ಕ  ಸಾಲಕೋಡ(salkodu) ಬಂಧಿತರು

ಹೊಸಾಕುಳಿ ಗ್ರಾಮದ(Hosakuli Village) ಉಮಾಮಹೇಶ್ವರ ದೇವಸ್ಥಾನದ (Umamaheshwara Temple) ಹತ್ತಿರ ಪೊಲೀಸರು ಗುರುವಾರ ಬೆಳಗಿನ ಜಾವ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ಜೂಜಾಟ ಆಡುತ್ತಿರುವುದು ಬೆಳಕಿಗೆ ಬಂದಿತ್ತು. ದಾಳಿ ಸಂದರ್ಭದಲ್ಲಿ 3100ರೂ. ಇಸ್ಪೀಟ್ ಎಲೆಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ(Honnavar Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಇನ್ಮುಂದೆ ಶನಿವಾರ ಅರ್ಧ ದಿನ ಶಾಲೆ.

ಅಕ್ರಮ ಮದ್ಯ ದಂದೆಯ ಪೊಲೀಸಪ್ಪನಿಂದ ಮತ್ತೆ ಅದೇ ಚಾಳಿ. ಆಗ ಗೋಕರ್ಣ ಈಗ ಅಂಕೋಲಾ.

ಹೈ ಹೀಲ್ಸ್ ಕೊಡಿಸದ ಪತಿಯ  ವಿರುದ್ಧ ಪತ್ನಿ ದೂರು.

ಫೆ.13ಕ್ಕೆ ಉಳವಿ ಮಹಾರಥೋತ್ಸವ. ಭಕ್ತರ ಗಮನಕ್ಕೆ.