ಅಂಕೋಲಾ(ANKOLA) : ಹಿಂದುಳಿದ, ಬಡ, ದಲಿತ, ಶೋಷಿತರ ಧ್ವನಿಯಾಗಿರುವ ಕಾಂಗ್ರೆಸ್ ನಿಷ್ಠಾವಂತ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್(B K Hariprasad) ಅವರ ಬಗ್ಗೆ ಅವಹೇಳನಕಾರಿ ಹಾಗೂ ಅಸಂಸದೀಯ ಪದವನ್ನು ಸಾರ್ವಜನಿಕವಾಗಿ ಬಳಸಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ(MLA HARISH POONJA) ಜನಪ್ರತಿನಿಧಿಯಾಗಿರಲು ಯೋಗ್ಯರಲ್ಲ ಎಂದು ಕೆಪಿಸಿಸಿ(KPCC) ಪ್ರಚಾರ ಸಮಿತಿಯ ರಾಜ್ಯ ಸಂಯೋಜಕ, ಹಿಂದುಳಿದ ವರ್ಗಗಳ ಯುವ ನಾಯಕ ಮಂಜುನಾಥ ನಾಯ್ಕ ಹೇಳಿದ್ದಾರೆ.
ಶಾಸಕರಾಗಿ ಪೊಲೀಸ್ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಸೇರಿದಂತೆ ಇಡೀ ಕಾರ್ಯಾಂಗದ ಅಧಿಕಾರಿಗಳ ಮೇಲೆ ಪುಡಿ ರೌಡಿಗಳಂತೆ ವರ್ತಿಸುವ ಹರೀಶ್ ಪೂಂಜಾ ಶಾಸಕರಾಗಿ ಮುಂದುವರೆಯುವ ಅರ್ಹತೆ ಇಲ್ಲ ಎಂದು ಕಿಡಿ ಕಾರಿದ್ದಾರೆ.
ಜಾತಿ ಗಣತಿಯ ಪರವಾಗಿ ಧ್ವನಿ ಎತ್ತುವ ನಾಯಕರ ಮೇಲೆ ವ್ಯವಸ್ಥಿತವಾಗಿ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿದೆ. ಹಿಂದುಳಿದ ನಾಯಕರಾದ(Backward Leaders) ಬಿಕೆ ಹರಿಪ್ರಸಾದ್ ಅವರ ಮೇಲೆ ಹರೀಶ್ ಪೂಂಜಾ ನೀಡಿರುವ ಹೇಳಿಕೆಗಳೇ ಅದಕ್ಕೆ ಸಾಕ್ಷಿ. ಜಾತಿ ಗಣತಿಯ ವಿರುದ್ಧ ಇರುವ ಬಿಜೆಪಿಯ ನಾಯಕರು, ತಮ್ಮ ನಿಲುವು ಬಹಿರಂಗವಾಗಿ ಸ್ಪಷ್ಟನೆ ಪಡಿಸಲಿ. ಅದನ್ನು ಬಿಟ್ಟು ಪುಡಾರಿ ರೌಡಿ ಪಡೆಯ ನಾಯಕರಂತೆ ವರ್ತಿಸುತ್ತಿರುವುದು ನಾಚಿಕೆಗೇಡು. ಕೂಡಲೇ ಹರೀಶ್ ಪೂಂಜಾ ನೀಡಿರುವ ಹೇಳಿಕೆಗಳನ್ನು ಹಿಂಪಡೆದು ಬೇಷರತ್ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದಾರೆ.
ಬಿ ಕೆ ಹರಿಪ್ರಸಾದ್ ಬ್ರಾಹ್ಮಣ ಸಮುದಾಯದ ವಿರೋಧಿ ಅಲ್ಲ. ಯಾವುದೇ ಜಾತಿಯನ್ನು ಇಡಿಯಾಗಿ ವಿರೋಧಿಸುವ
ಜಾಯಮಾನವೂ ಅವರದ್ದಲ್ಲ. ಹರಿಪ್ರಸಾದ್ ಅವರದ್ದು
ಸೈದ್ಧಾಂತಿಕ ವಿರೋಧ ಮಾತ್ರವಾಗಿದೆ.
ಬಿಕೆ ಹರಿಪ್ರಸಾದ್ ಅವರ ಹಿರಿತನ, ಘನತೆ, ಮುತ್ಸದ್ದಿತನಕ್ಕೆ ಹರೀಶ್ ಪೂಂಜಾ ಅಂತಹ ಎಳಸು ರಾಜಕಾರಣಿಗಳ ಸರ್ಟಿಫಿಕೇಟ್ ಅಗತ್ಯವಿಲ್ಲ. ಸಂಸ್ಕೃತಿ, ಧರ್ಮದ ಬಗ್ಗೆ ಪೊಳ್ಳು ಭಾಷಣ ಬಿಗಿಯುವ ಪೂಂಜಾ, ತನ್ನ ಅಸಬ್ಯ ಭಾಷೆಗೆ ಕಡಿವಾಣ ಹಾಕಿ, ನಾಲಗೆಯ ಮೇಲೆ ಹಿಡಿತ ಇಟ್ಟು ಮಾತಾಡಲಿ, ಇಲ್ಲದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತೇವೆಂದು ಹೇಳಿದ್ದಾರೆ.
ಹಿರಿಯ ರಾಜಕಾರಣಿ ಬಿಕೆ ಹರಿಪ್ರಸಾದ್ ಅವರ ನೈತಿಕ ಶಕ್ತಿ ಕುಗ್ಗಿಸಲು ನಡೆಸುತ್ತಿರುವ ವ್ಯವಸ್ಥಿತ ಹುನ್ನಾರವನ್ನು ಇಡೀ ಹಿಂದುಳಿದ ಸಮುದಾಯಗಳು ಖಂಡಿಸುತ್ತವೆ ಹಾಗೂ ಅವರ ಸಾಮಾಜಿಕ ಹೋರಾಟ ಹಾಗೂ ಸೈದ್ದಾಂತಿಕ ನಿಲುವುಗಳಿಗೆ ಬಹಿರಂಗ ಬೆಂಬಲ ನೀಡಲಿದ್ದೇವೆಂದು ಮಂಜುನಾಥ್ ನಾಯ್ಕ ಹೇಳಿದ್ದಾರೆ.
ಇದನ್ನು ಓದಿ : ಸಾಹಿತಿ, ನ್ಯಾಯವಾದಿ ಶಂಕರ್ ನಾಯ್ಕ ಅವರಿಗೆ ಕಲಾಸಿರಿ ಪ್ರಶಸ್ತಿ ಪ್ರದಾನ.
ಮಾನವೀಯ ಗುಣ ಬಿಟ್ಟು ಹೋದ ಚಿತ್ರ ನಿರ್ದೇಶಕ