ಯಲ್ಲಾಪುರ: ಕಾಲುಜಾರಿ ನೀರಿಗೆ ಬಿದ್ದು ಪ್ರವಾಸಿಗನೊಬ್ಬ
ಮೃತಪಟ್ಟ ಘಟನೆ ತಾಲೂಕಿನ ಸಾತೊಡ್ಡಿ ಜಲಪಾತದಲ್ಲಿ ನಡೆದಿದೆ.
ಹುಬ್ಬಳ್ಳಿ(Hubli)ಯ ಮೌಲಾಲಿದರ್ಗಾ ಸಮೀಪದ ಹಸನ ಮದರಸಾಬ್ ಕಾಲೇಮದರ (36) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಸಂಬಂಧಿಕರು ಹಾಗೂ ಗೆಳೆಯರೊಂದಿಗೆ ನಿನ್ನೆ ಸಂಜೆ ಸಾತೊಡ್ಡಿ ಜಲಪಾತ ವೀಕ್ಷಣೆಗೆ ಬಂದಿದ್ದ. ಸ್ನಾನ ಮಾಡಲು ನೀರಿಗೆ ಇಳಿದ ಸಂದರ್ಭದಲ್ಲಿ ಆಕಸ್ಮಿಕ ಕಾಲು ಜಾರಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಯಲ್ಲಾಪುರ(Yallapur)ಪೊಲೀಸರು ಸ್ಥಳಕ್ಕಾಗಮಿಸಿದ ಶವಕ್ಕಾಗಿ ಶೋಧ ನಡೆಸಿ ಮೃತದೇಹವನ್ನ ಮೇಲಕ್ಕೆ ತೆಗೆದಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.