ಅಂಕೋಲಾ : ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ಗಂಗಾವಳಿ ನದಿಯ ಶೋಧ ಕಾರ್ಯಾಚರಣೆಗೆ (SEARCHING OPERATIONS) ತಡೆ ಒಡ್ಡಲಾಗಿದೆ.
ಜುಲೈ 16 ರಂದು ಅಂಕೋಲಾ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಭೂ ಕುಸಿತ (LANDSLIDE) ಉಂಟಾಗಿತ್ತು. ಘಟನೆಯಲ್ಲಿ 11 ಜನರು ನಾಪತ್ತೆಯಾಗಿದ್ದರು. ದುರ್ಘಟನೆಯಲ್ಲಿ ಬೃಹತ್ ಆಲದ ಮರಗಳು, ಬಂಡೆಗಲ್ಲುಗಳು, ಮಣ್ಣು,ಅಂಗಡಿ, ಮನೆ ನದಿಯನ್ನ ಸೇರಿಕೊಂಡಿವೆ. ಪಕ್ಕದ ಉಳುವರೆ ಗ್ರಾಮದ ಮನೆಗಳನ್ನ ಕೂಡ ದ್ವಂಸ ಮಾಡಿತ್ತು.
ಎನ್ ಡಿ ಆರ್ ಎಪ್(NDRF) , ಎಸ್ ಡಿ ಆರ್ ಎಪ್(SDRF) , ಆರ್ಮಿ(ARMY) , ನೇವಿ(NAVY) ಕಾರ್ಯಾಚರಣೆ ನಡಿಸಿದಲ್ಲದೆ ಈಶ್ವರ್ ಮಲ್ಪೆ ತಂಡ ಕೂಡ ಗಂಗಾವಳಿ ನದಿಯ ಆಳಕ್ಕೆ ಇಳಿದು ಎರಡು ದಿನಗಳ ಶೋಧ ನಡೆಸಿತ್ತು. ಆದ್ರೆ ಮೂವರ ಮೃತದೇಹ (DEAD BODY) ಪತ್ತೆಯಾಗಿಲ್ಲ. ಹೀಗಾಗಿ ಇವತ್ತು ಅಮವಾಸೆ ಆಗಿದ್ದರಿಂದ ನದಿಯ ನೀರು ಸಹಜಸ್ಥಿತಿಗೆ ಬರುವ ಕಾರಣಕ್ಕೆ ಈಶ್ವರ್ ಮಲ್ಪೆ ತಂಡ ಆಗಮಿಸಿಟ್ಟು. ಶೋಧ ಕಾರ್ಯಾಚರಣೆಗೆ ಬೇಕಾಗುವಂತ ದೋಣಿಗಳು(BOATS), ಮೀನುಗಾರರು(FISHERMANS) ಸಿದ್ದರಾಗಿದ್ದರು. ಆದರೆ ಪೊಲೀಸ್ (POLICE) ಇಲಾಖೆಯಿಂದ ಶೋಧಕ್ಕೆ ಅನುಮತಿ ನೀಡಿಲ್ಲ. ಇದರಿಂದ ಮಲ್ಪೆ ತಂಡ ಮತ್ತು ಮೀನುಗಾರರು ವಾಪಸ್ ಹೋಗಿದ್ದಾರೆ.
ಜುಲೈ 16 ರಂದು ಸಂಭವಿಸಿದ ಘಟನೆಯಲ್ಲಿ ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ್ ನಾಯ್ಕ ಮತ್ತು ಕೇರಳದ ಅರ್ಜುನ್ ನಾಪತ್ತೆಯಾಗಿದ್ದಾರೆ. ಅವರಿಗೆ ಸದ್ಗತಿ ಸಿಗಬೇಕು. ಈ ಕಾರಣಕ್ಕೆ ಶೋಧ ನಡೆಸಲು ಈಶ್ವರ್ ಮುಂದಾಗಿದ್ದರು.
ಇಂದು ಅಮವಾಸೆ (AMAVASE) ಆಗಿದ್ದರಿಂದ ನದಿಯ ನೀರು ಕೊಂಚ ಶಾಂತವಾಗಬಹುದು. ಕಾರ್ಯಾಚರಣೆ ನಡೆಸಬಹುದು ಅಂದುಕೊಂಡ ಈಶ್ವರ್ ಅವರ ತಂಡಕ್ಕೆ ನಿರಾಶೆಯಾಗಿದೆ. ಘಟ್ಟದ ಮೆಲ್ಬಾಗದಲ್ಲಿ ಮಳೆ ಅಧಿಕವಾಗಿದ್ದರಿಂದ ನದಿಯ ನೀರಿನ ಒತ್ತಡ ಜಾಸ್ತಿಯಿದೆ. ಈ ಕಾರಣಕ್ಕೆ ಅಧಿಕಾರಿಗಳು ರಿಸ್ಕ್ ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ. ಮುಂದೆ ಮಳೆ ಕಡಿಮೆಯಾದಾಗ, ಕರೆದಾಗ ಖಂಡಿತ ಬರುವುದಾಗಿ ಈಶ್ವರ ಮಲ್ಪೆ ತಿಳಿಸಿದ್ದಾರೆ.