ಜೋಯಿಡಾ : ಪಿಎಸ್ಐ ದೌರ್ಜನ್ಯ ಖಂಡಿಸಿ ರಾಮನಗರ ಪೊಲೀಸ್ ಠಾಣೆಯ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಾವನ್ನಪ್ಪಿದ್ದಾನೆ.
ರಾಮನಗರದ ಹನುಮಾನ್ ಗಲ್ಲಿಯ ನಿವಾಸಿಯಾಗಿರುವ ಭಾಸ್ಕರ್ ಬೊಂಡಲ್ಕರ್ ಎಂಬಾತನೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾನೆ.
ಪೊಲೀಸರ ದೌರ್ಜನ್ಯ ಖಂಡಿಸಿ ಜೂನ್ 13 ರಂದು ಸಂಜೆ ರಾಮನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಗಂಭೀರ ಗಾಯಗೊಂಡಿದ್ದ ಆತನನ್ನು ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಪೊಲೀಸ್ ಹೇಳಿಕೆಯ ಪ್ರಕಾರ ಜಮೀನು ವ್ಯಾಜ್ಯ ಸಂಬಂಧಿಸಿ ಆತ ಕುಡಿದು ಠಾಣೆಗೆ ಬಂದಿದ್ದ. ಕುಡಿದು ಬೈಕ್ ಚಾಲನೆ ಮಾಡದಂತೆ ಸಲಹೆ ನೀಡಿದ್ದರು. ದುಡುಕಿನ ನಿರ್ಧಾರದಿಂದ ತನ್ನ ಸಾವನ್ನ ತಾನು ತಂದುಕೊಂಡಿದ್ದಾನೆ.