ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬನವಾಸಿ (Banavasi) :  ರಾಜ್ಯದ ಕರಾವಳಿಯ ಉತ್ಸವಗಳಲ್ಲಿ ಒಂದಾದ ಉತ್ತರಕನ್ನಡ ಜಿಲ್ಲೆಯ  ಕರಾವಳಿ ಉತ್ಸವಕ್ಕೆ(Karavali Utsav) ಸರಕಾರದಿಂದ ಐದು ಕೋಟಿ ಹಣ ನೀಡುವುದಾಗಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಘೋಷಿಸಿದ್ದಾರೆ.

ಶನಿವಾರ ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಕದಂಬೋತ್ಸವ (Kadambotsava) ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದರು. ಶೀಘ್ರದಲ್ಲಿ ಉತ್ಸವ ದಿನ ನಿಗದಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಹಾಗೂ ಜಿಲ್ಲಾಧಿಕಾರಿಗಳಿಗೆ ಕದಂಬೋತ್ಸವದ ವೇದಿಕೆಯಲ್ಲಿ ಸೂಚನೆ ನೀಡಿದ್ದಾರೆ.

ಪ್ರತಿ ವರ್ಷವೂ ಕಾರವಾರದಲ್ಲಿ ಕರಾವಳಿ ಉತ್ಸವ(Karavali Utsav) ನಡೆಯುತ್ತಾ ಬಂದಿದ್ದು, ಈ ಬಾರೀ ಏಪ್ರಿಲ್ 18 ರಿಂದ 22ರವರೆಗೆ  ದಿನಾಂಕ  ನಿಗದಿ ಮಾಡಲಾಗಿತ್ತು. ಈಗ ಕಾಲ ಕಡಿಮೆ ಇರೋದ್ರಿಂದ ಮೇ ತಿಂಗಳಲ್ಲಿ ಕಾರವಾರದ ರವೀಂದ್ರನಾಥ್ ಠಾಗೋರ್ ಕಡಲ ತೀರದಲ್ಲಿ (Tagore Beach) ಅದ್ದೂರಿಯಾಗಿ ಉತ್ಸವ ಆಚರಿಸುವ ಸಾಧ್ಯತೆ ಇದೆ.

ಸಚಿವರು ಉತ್ಸವಕ್ಕೆ ಹಣ ಘೋಷಣೆ ಮಾಡಿರುವುದರಿಂದ ಉತ್ಸವದ ಬಗ್ಗೆ ಉತ್ಸಾಹ ಗರಿಗೆದರಿದ್ದು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.

ಇದನ್ನು ಓದಿ: ಬನವಾಸಿಯಲ್ಲಿ ಅದ್ದೂರಿ ಕದಂಬೋತ್ಸವ. ಪಂಪ ಪ್ರಶಸ್ತಿ ಪ್ರದಾನ.

ಬೆಲೆ ಏರಿಕೆ ಖಂಡಿಸಿ ಅಂಕೋಲಾದಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ.