ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ  ತಲ್ಲೂರು ರಾಷ್ಟ್ರೀಯ ಹೆದ್ದಾರಿ ಯ ಮಧ್ಯಭಾಗದಲ್ಲಿ  ಬಸ್ಸು ನಿಲ್ಲಿಸಿ  ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ  ತೊಂದರೆ ಆಗುತ್ತಿದೆ ಎಂದು  ತಲ್ಲೂರು ಭಾಗದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವಾರಗಳಿಂದ   ತಾಲೂಕಿನಾದ್ಯಂತ  ಭಾರಿ ಗಾಳಿ ಮಳೆ ಸುರಿಯುತ್ತಿದ್ದು ಪ್ರತಿ ದಿನ  ಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬಸ್ಸಿಗೆ ಹೋಗಿ ಬರಲು  ತಲ್ಲೂರಿನಲ್ಲಿ  ಒಳ್ಳೆಯ ಬಸ್  ನಿಲ್ದಾಣವಿದ್ದರೂ  ಬಸ್ಸಿನವರು  ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ  ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ  ಬಸ್ ನಿಲ್ಲಿಸಿ  ಓಡಾಡುವ  ಪ್ರಯಾಣಿಕರಿಗೆ  ತೊಂದರೆ ಉಂಟುಮಾಡಿದೆ ಮಾಡುತ್ತಿದ್ದಾರೆಂದು ಎಂದು  ಹರೀಶ್ ಆಚಾರ್ಯ ಹೇಳಿದ್ದಾರೆ.

   ಬಸ್ ನಿಲ್ದಾಣದಲ್ಲಿ ಬಸ್  ನಿಲ್ಲಿಸದೇ ಇರೋದ್ರಿಂದ ಬಸ್ ನಿಲ್ದಾಣವು  ಕುಡುಕರ ಹಾಗೂ ಬಿಡಿ ಸಿಗರೇಟ್ ಸೇವನೆ ಮಾಡುವವರಿಗೆ ಹಾಗೂ ಸೋಮಾರಿಗಳ  ತಾಣವಾಗಿದೆ , ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಲ್ಲೂರು ಗ್ರಾಮ ಪಂಚಾಯತ್  ಮತ್ತು ಕುಂದಾಪುರ ಪೊಲೀಸ್ ಠಾಣಾಧಿಕಾರಿಗಳು, ಕುಂದಾಪುರ ಸಂಚಾರಿ ಪೊಲೀಸರು ಇತ್ತ ಕಡೆ ಗಮನಹರಿಸಿ  ಬಸ್ ನಿಲ್ದಾಣ ಇರುವ ಕಡೆ  ಬಸ್ ನಿಲ್ಲಿಸಿ  ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರ ಮನವಿ ಮಾಡಿದ್ದಾರೆ.