ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ವ್ಯಕ್ತಿಯೊರ್ವರು ಒಂದೇ ದಿನದಲ್ಲಿ ಮೂರು ಬಾರಿ ಶಿರ್ವೆ ಗುಡ್ಡ ಏರಿ ಇಳಿದು ಬಂದು ತಮ್ಮ ಪರ್ವತರೋಹಿ ಸಾಧನೆಯನ್ನ ಮುಂದುವರಿಸಿದ್ದಾರೆ.

ಕೈಗಾದಲ್ಲಿ ಉದ್ಯೋಗಿಯಾಗಿರುವ ರಮೇಶ ಶ್ರೀನಿವಾಸಪುರ ಸಾಧನೆ ಮಾಡಿದವರು. ಒಂದೇ ದಿನ ಇವರು ನಾಲ್ಕನೇ ಬಾರೀ ಕಾರವಾರ ತಾಲೂಕಿನ ಶಿರ್ವೆ ಗುಡ್ಡ ಏರಿ ಇಳಿಯಲು ಮುಂದಾಗಿದ್ದರು. ಆದರೆ ಸಂಜೆಯ ಕತ್ತಲು ಆವರಿಸಿದ್ದರಿಂದ ಮೂರು ಬಾರೀ ಮಾತ್ರ ಸಾಗಿ ಬಂದಿದ್ದಾರೆ.

ರಮೇಶ ಶ್ರಿನಿವಾಸಪುರ ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಮಾತ್ರವಲ್ಲ, ಸಹ್ಯಾದ್ರಿಯ ಪರ್ವತಗಳ ಪೈಕಿ ಎತ್ತರದ ತುದಿ ಯನ್ನು ಏರಿಳಿದು ವಿಭಿನ್ನ ಸಾಧನೆ ಮಾಡಿದ್ದಾರೆ. ಈಗಾಗಲೇ ಎವೆರೆಸ್ಟ್ ಬೇಸ್ ಕ್ಯಾಂಪ್, ಹಿಮಾಚಲ ಮತ್ತು ಉತ್ತರಾಖಂಡ ಹಾಗು ಕಾಶ್ಮೀರ ವ್ಯಾಲಿಗಳಲ್ಲಿ ಹಲವು ದಾಖಲೆ ಚಾರಣ ಸಾಹಸ ಕೈಗೊಂಡಿದ್ದರು. ಬೈಕ್ ನಲ್ಲಿ ಕನ್ಯಾಕುಮಾರಿ, ಕಾಶ್ಮೀರದಲ್ಲಿ  ಡರ್ಟ್ ಟ್ರ್ಯಾಕ್ ಬೈಕ್ ಟ್ರಾವೆಲಿಂಗ್ ಕೈಗೊಂಡಿದ್ದಾರೆ. ಪೂನಾದಿಂದ ಗೋವೆ ಮಾರ್ಗವಾಗಿ ಸೈಕ್ಲಿಂಗ್ ಮಾಡುತ್ತಾ ದಿನಕ್ಕೆ ಸುಮಾರು ಇನ್ನೂರು ಕಿಲೋಮೀಟರ್ ಸೈಕ್ಲಿಂಗ್ ಮತ್ತು ಹಲವು ಮ್ಯಾರಾಥಾನ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
.
ಸ್ಥಳೀಯರಲ್ಲಿ ಪ್ರವಾಸೋದ್ಯಮ ಹಾಗೂ ಚಾರಣ ಪ್ರಿಯರಲ್ಲಿ ಈ ಬಗ್ಗೆ ಆಸಕ್ತಿ ಮೂಡಿಸಲು ಶಿರ್ವೆ ಗುಡ್ಡವನ್ನ  ಹೊರ ಜಗತ್ತಿಗೆ ಪರಿಚಯಿಸುವ ಮತ್ತು ಯುವ ಜನರಿಗಾಗಿ ವಿಭಿನ್ನ ಯೋಜನೆ ಕೈಗೊಂಡಿದ್ದಾಗಿ ಅವರು ಹೇಳಿದ್ದಾರೆ.

ಕೇವಲ ಉತ್ಸವ ಮತ್ತು ಹಬ್ಬದ ದಿನಗಳಲ್ಲಿ ಮಾತ್ರ ಶಿರ್ವೆ ಗುಡ್ಡದ ಕಡೆಗೆ ಜನ ತೆರಳುತ್ತಾರೆ. ಆದರೆ  ಈ ಚಾರಣದ ತುದಿಗೆ ಯಾವಾಗಲೂ ಹಸಿರು ಪರ್ವತದ ಚಾರಣ ಅವಕಾಶ ಇದ್ದು ಇಲ್ಲಿ ಮೂಲ ಭೂತ ಸೌಲಭ್ಯ ಕಲ್ಪಿಸಿದರೆ ಅಭಿವೃದ್ಧಿಯು ಸಾಧ್ಯವಿದೆ ಎಂಬುದು ಇವರ ಅಭಿಪ್ರಾಯ

ಇವರಿಗೆ ಕಥಾಯಾನ ತಂಡದ ನಿರ್ದೇಶಕ ಸಂತೋಷಕುಮಾರ ಮೆಹೆಂದಳೆ ಮತ್ತು ಸದಸ್ಯರು ಸಹಕಾರ ಮತ್ತು ಬೆಂಬಲ ನೀಡಿದ್ದು, ಏರಿಳಿಯಲು ಜೊತೆಯಾಗಿ ಮತ್ತೊಬ್ಬ ಸಹೋದ್ಯೋಗಿ ಶಿವಬಸವಯ್ಯ ಸಾಥ್ ನೀಡಿದ್ದರು.

ಇದನ್ನು ಓದಿ : ಮೀಟರ್ ಬಡ್ಡಿ, ಮೈಕ್ರೋಫೈನಾನ್ಸ್ ಅಬ್ಬರ ತಡೆಯಲು  ಧೈರ್ಯದಿಂದ ಮುಂದೆ ಬನ್ನಿ. ಪೊಲೀಸ್ ಇಲಾಖೆ ಪ್ರಕಟಣೆ.

ಪ್ರಯಾಗರಾಜ್ ನಲ್ಲಿ ಪವಿತ್ರ ಸ್ನಾನ ಮಾಡಿದ ಡಿ ಕೆ ಶಿವಕುಮಾರ. ವ್ಯವಸ್ಥೆ ಬಗ್ಗೆ ಮೆಚ್ಚುಗೆ.

ಗಾಳ ಹಾಕಿ ಮೀನು ಹಿಡಿದ ಹವ್ಯಾಸಿಗಳ ದಂಡು. ಸಖತ್ ಫಿಶಿಂಗ್.

ಗೃಹ ರಕ್ಷಕ ಇಲಾಖೆಗೆ  ನೇಮಕಾತಿಗೆ ಅರ್ಜಿ ಆಹ್ವಾನ