ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ಜೋಯಿಡಾ ತಾಲೂಕಿನ ಉಳವಿಯ ಶ್ರೀ ಚನ್ನಬಸವೇಶ್ವರ(Ulavi Chennabasaveshwar) ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಈಗಾಗಲೇ ಭಕ್ತರು ಚಕ್ಕಡಿ ಗಾಡಿಗಳ ಮೂಲಕ ಉಳವಿಯತ್ತ ಆಗಮಿಸುತ್ತಿದ್ದಾರೆ.
ಫೆ.13 ರಂದು ಸಂಜೆ 4 ಗಂಟೆಗೆ ಮಹಾ ರಥೋತ್ಸವ(Maha Rathotsava) ನಡೆಯಲಿದೆ ಎಂದು ಉಳವಿ (Ulavi) ಚನ್ನಬಸವೇಶ್ವರ ಟ್ರಸ್ಟಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ತಿಳಿಸಿದ್ದಾರೆ. ಉಳವಿ ಚನ್ನಬಸವೇಶ್ವರ ದೇವರ (Ulavi Chennabasaveshwar Deva) ಜಾತ್ರೆ ರಾಜ್ಯದಲ್ಲಿಯೇ ದೊಡ್ಡ ಜಾತ್ರೆಯಾಗಿದೆ. ಜಾತ್ರೆಗೆ ಬರುವ ಭಕ್ತರಿಗಾಗಿ ಎಲ್ಲ ರೀತಿಯ l ವ್ಯವಸ್ಥೆ ಮಾಡಲಾಗಿದೆ ಎಂದರು.
ಜಾತ್ರೆಗೆ ಸಂಬಂಧಿಸಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಂಜಯ ಕಿತ್ತೂರು, ದೇವಸ್ಥಾನದ ಪ್ರಧಾನ ಅರ್ಚಕ ಶಂಕ್ರಯ್ಯ ಕಲ್ಮಠ ಶಾಸ್ತ್ರಿ ಮಾತನಾಡಿ, ಫೆ.15ರಂದು ಜಾತ್ರೆ ಮುಕ್ತಾಯಗೊಳ್ಳಲಿದೆ. ಜಾತ್ರೆಗೆ ಭಕ್ತರಿಗೆ ಕೆಲ ಸೂಚನೆ ನೀಡಿದ್ದಾರೆ.
ಚಕ್ಕಡಿ ಗಾಡಿಗೆ ಎತ್ತುಗಳೊಂದಿಗೆ ಮಾತ್ರ ಬರಬೇಕು. ಜಾತ್ರೆಗೆ ಬರುವ ಚಕ್ಕಡಿಗೆ ರೇಡಿಯಂ (Redium) ಹಚ್ಚಿರಬೇಕು. ಕುದುರೆ ಚಕ್ಕಡಿಗಳನ್ನು ತರಬಾರದು. ಜಾತ್ರೆಯಲ್ಲಿ ಪ್ಲಾಸ್ಟಿಕ್ ಬಳಕೆ, ಸಾರಾಯಿ(Liquor) ಮಾರಾಟ ಸಂಪೂರ್ಣ ನಿಷೇಧ ಮಾಡಲಾಗಿದೆ. ಭಕ್ತರು ಈ ಸೂಚನೆಯನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಈ ಬಾರಿ ಜಾತ್ರೆಯಲ್ಲಿ ನಾಲ್ಕು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಹಿಂದಿನ ವರ್ಷ 1600 ಚಕ್ಕಡಿ ಗಾಡಿಗಳು ಬಂದಿದ್ದವು. ಬೆಳಗಾವಿ(Belagavi), ಧಾರವಾಡ(Dharwad), ಉತ್ತರ ಕನ್ನಡ(Uttarakannada) ಜಿಲ್ಲೆಯಿಂದ ಹೆಚ್ಚಿನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿ ಪಾರ್ಕಿಂಗ್ಗೆ ಇದ್ದ ತೊಂದರೆಯನ್ನೂ ಬಗೆಹರಿಸಿಕೊಳ್ಳಲಾಗಿದೆ. ಸುಮಾರು 200 ಸ್ವಯಂ ಸೇವಕರು ಇರಲಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮೊಖಾಶಿ ಮಾತನಾಡಿ, ಜಾತ್ರೆಗಾಗಿಯೇ 1.5 ಕೋಟಿ ರೂ. ವೆಚ್ಚದ ಜಲಾಗಾರ ನಿರ್ಮಾಣ ಆಗಿದೆ. ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚೆಕ್ಪೋಸ್ಟ್ಗಳಲ್ಲಿಯೇ ತಪಾಸಣೆ ಮಾಡಲಾಗುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ 200 ಶೌಚಾಲಯ ಕಟ್ಟಿಸುವ ತಯಾರಿ ನಡೆದಿದೆ ಎಂದು ಹೇಳಿದ್ದರು.
ಇದನ್ನು ಓದಿ : ಭಟ್ಕಳದಲ್ಲಿ ಜೂಜಾಟ ಅಡ್ಡೆ ಮೇಲೆ ಪೊಲೀಸರ ದಾಳಿ. ಏಳು ಜನರ ಬಂಧನ.
ಬಡ್ಡಿ ದಂಧೆಕೋರರ ಮೀಟರ್ ಇಳಿಸಿದ ಪೊಲೀಸರು. ಇಬ್ಬರ ಬಂಧನ