ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar): ತಾಲೂಕಿನ ಗೋರ್ ಬಂಜಾರರ ಪೋರಿಯಾ ತಾರಾ ಮಹಾನಾಯಕ ತಾಂಡಾ ಬಿಣಗಾ  ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಮಟ್ಟದ 286 ನೇ ವರ್ಷದ ಶ್ರೀ ಸಂತ ಸೇವಾಲಾಲ ಜಯಂತ್ಯೋತ್ಸವ ವಿಜೃಂಭಣೆಯಿಂದ ಜರುಗಿತು.

ಭಾನುವಾರ ಬೆಳಿಗ್ಗೆ  ಶ್ರೀ ಸಂತ ಸೇವಾಲಾಲರ ಪೂಜೆ ಹಾಗೂಭೋಗ ಕಾರ್ಯಕ್ರಮ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಕಾರವಾರ ಶಾಸಕ ಸತೀಶ್ ಸೈಲ್ ಉದ್ಘಾಟಿಸಿದರು.  ಅಧ್ಯಕ್ಷತೆಯನ್ನ ಕ.ವಿ.ವಿ. ಸ್ನಾತಕೋತ್ತರ ಕೇಂದ್ರ ಆಡಳಿತಾಧಿಕಾರಿ  ಜಗನ್ನಾಥ ಎಲ್. ರಾಠೋಡ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಎಸ್ ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷ ಜಿ ಡಿ ಮನೋಜ, ಉಮೇಶ್ ದೊಡ್ಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಅದ್ದೂರಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇದನ್ನು ಓದಿ : ಕೇಣಿ ಗ್ರಾಮದಲ್ಲಿ ನಿಷೇಧಾಜ್ಞೆ. ಜಿಲ್ಲಾಧಿಕಾರಿ ಆದೇಶ.

ಮಗಳ ಧಾರೆ ಎರೆದು ಕೊಟ್ಟ ಮರುಕ್ಷಣವೇ ತಂದೆ ಸಾವು. ಮದುವೆ ಮಂಟಪದಲ್ಲಿ ದುರಂತ.

ಶಿರಸಿಯಲ್ಲಿ ಪ್ರೀತಿ ಕೊಂದ ಕೊಲೆಗಾರ. ಆರೋಪಿ ಆರೆಸ್ಟ್.