ಗೋಕರ್ಣ(Gokarn): ಇಲ್ಲಿನ ಮಿಡ್ಲ ಬೀಚಿನಲ್ಲಿ ಈಜಾಡಲು ತೆರಳಿದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಬೆಂಗಳೂರಿನ ರವಿ (30), ಬೆಂಗಳೂರು ವಿಜಯನಗರದ ಪ್ರತೀಕ್ ಪಿ (33) ಮೃತ ಪ್ರವಾಸಿಗರೆಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಒಟ್ಟು 15 ಜನರು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಇಂದು ಸಂಜೆ ಎಲ್ಲರೂ ಇಲ್ಲಿನ ಮಿಡ್ಲ ಬೀಚಿಗೆ ಈಜಲು ತೆರಳಿದ್ದರು. ಇಬ್ಬರು ಸಮುದ್ರ ಸುಳಿಗೆ ಸಿಲುಕಿದ್ದಾರೆ. ಲೈಫ್ ಗಾರ್ಡ್ ಸಿಬ್ಬಂದಿಗಳು ಅಪಾಯಕ್ಕೆ ಸಿಲುಕಿದವರನ್ನ ದಡಕ್ಕೆ ತಂದಿದ್ದಾರೆ. ಬಳಿಕ ಗೋಕರ್ಣ ಪ್ರಾಥಮಿಕ ಕೇಂದ್ರಕ್ಕೆ ರವಾನಿಸಲಾಯಿತಾದರೂ ಪ್ರಯೋಜನವಾಗಿಲ್ಲ.
ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ವಿದ್ಯುತ್ ಪ್ರವಹಿಸಿ ಶಾಲಾ ವಿದ್ಯಾರ್ಥಿನಿ ಸಾವು
ಜೈಲು ಅಧಿಕಾರಿ ಕಾರು ಸ್ಫೋಟಗಳಿಸುವ ಬೆದರಿಕೆ
ನಾನ್ ವೆಜ್ ತಿನ್ನಬೇಡ ಎಂದು ಬಾಯ್ ಫ್ರೆಂಡ್ ಕಿರುಕುಳ. ಮಹಿಳಾ ಪೈಲಟ್ ಸಾವು