ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ಗರ್ಭ ಧರಿಸಿದ ಆಕಳ(Cow) ಹತ್ಯೆ ಮಾಡಿ ಮಾಂಸ ಕದ್ದು ಪರಾರಿಯಾದ ಪ್ರಕರಣದ ನಡುವೆ ಹೊನ್ನಾವರ ಸುತ್ತಮುತ್ತ ಗ್ರಾಮದಲ್ಲಿ ಗೋ ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸುವಲ್ಲಿ  (Arrest) ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊನ್ನಾವರ (Honnavar) ತಾಲೂಕಿನ ಹೆರಂಗಡಿಯ(Herangadi) ಅಸ್ಕಾರ ಕಾಲೋನಿಯ ಚಾಲಕ ಅಲ್ತಾಪ್ ಅಹಮ್ಮದ್ ಕಾಟಾಪುರುಸು (28),  ಮತೀನ್ ಅಹಮ್ಮದ್ ಕಾಟಾಪುರುಸು (37) ಹಾಗೂ ಹೊನ್ನಾವರ ಕರ್ವಾದಲ್ಲಿ (Kharva) ಅಡುಗೆ ಕೆಲಸ ಮಾಡುವ ಮಹಮ್ಮದ್ ಹುಸೇನ್ ಅಬ್ಬಾಸ ಬಂಧಿತರಾಗಿದ್ದಾರೆ.

  ಈ ಮೂವರು ಖತಾರನಾಕ್ ಆದ್ಮಿಗಳು ಹೊನ್ನಾವರದ ಸಾಲ್ನೋಡ(Salkodu) , ಹೊಸಾಕುಳಿ(Hosakuli) ಹಾಗೂ ಕವಲಕ್ಕಿ(Kavalakki), ಕೊಂಡಾಕುಳಿ, ಭಾಗದಲ್ಲಿ ಗೋ ಕಳ್ಳತನ(Cattle Theft) ನಡೆಸುತ್ತಿರುವುದು ತನಿಖೆಯಿಂದ ಗೊತ್ತಾಗಿದೆ. ಬಂಧಿತರಿಗೆ ನ್ಯಾಯಾಲಯಕ್ಕೆ ಒಪ್ಪಿಸಿದ್ದು,  ನ್ಯಾಯಾಂಗ ಬಂಧನ ವಿಧಿಸಿದೆ.

ಹೊನ್ನಾವರ ತಾಲೂಕಿನ ಸಾಲ್ಕೊಡ ಬಳಿಯ ಕೊಂಡಾಕುಳಿಯಲ್ಲಿ ಜನವರಿ 19ರಂದು ಕೃಷ್ಣ ಆಚಾರಿ ಎಂಬುವವರು ಸಾಕಿದ್ದ ಹಸು  ಕಾಡಿಗೆ ಹೋಗಿದ್ದು ಮನೆಗೆ ವಾಪಾಸ್ ಆಗಿರಲಿಲ್ಲ. . ಮೇಯುತ್ತಿದ್ದ ಹಸುವನ್ನು ಹಿಡಿದ ಮೂವರು ಅದರ ರುಂಡ ಹಾಗೂ ಕಾಲು ಕತ್ತರಿಸಿದ್ದರು. ಹೊಟ್ಟೆಯೊಳಗಿದ್ದ ಕರುವನ್ನು ಬಿಸಾಡಿ ಮಾಂಸ ತೆಗೆದುಕೊಂಡು ಪರಾರಿಯಾಗಿದ್ದರು.

ಭಾನುವಾರ ಆಕಳಿಗೆ ಹುಡುಕಾಟ ನಡೆಸಿದಾಗ  ಸಾವನಪ್ಪಿರುವುದು ಗೊತ್ತಾಗಿತ್ತು. ಈ ಪ್ರಕರಣ ಇಡೀ ರಾಜ್ಯವನ್ನ ಬೆಚ್ಚಿ ಬೀಳಿಸಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳಕ್ಕೆ  ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ ಜಗದೀಶ ಅಲ್ಲಿ ಭೇಟಿ ನೀಡಿ ಸಾಕ್ಷಿ ಸಂಗ್ರಹಿಸಿದ್ದರು. ಪೊಲೀಸ್ ಉಪಾಧ್ಯಕ್ಷ ಮಹೇಶ ಕೆ, ಪೊಲೀಸ್‌ ನಿರೀಕ್ಷಕ ಸಿದ್ದರಾಮೇಶ್ವರ ಎಸ್ ಸಾಕಷ್ಟು ಶೋಧ ನಡೆಸಿ ಹಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದರು.

ಭಟ್ಕಳ ಸಿಪಿಐ ಸಂತೋಷ ಕಾಯ್ಕಿಣಿ, ಕುಮಟಾ ಪಿಐ ಯೋಗೇಶ ಕೆ ಎಂ ಸಹ ತನಿಖೆಯಲ್ಲಿ ಭಾಗವಹಿಸಿದ್ದರು. ಪಿಎಸ್‌ಐ ಭರತ, ರವಿ ಗುಡಿ, ಮಯೂರ, ಶ್ರೀಕಾಂತ ರಾಠೋಡ, ಖಾದರ ಪಾಷಾರನ್ನು ಒಳಗೊಂಡ ಮೂರು ತಂಡಗಳು ಗೋ ಭಕ್ಷಕರ ಹುಡುಕಾಟ ನಡೆಸಿತ್ತು. ಇದೀಗ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ : ಸೋಡಿಗದ್ದೆ ಶ್ರೀ ಮಹಾಸತಿ ದೇವಿಗೆ ಜಾತ್ರೆಯ ಸಂಭ್ರಮ

ಸವಣೂರು ಅಗಲಿದ ವ್ಯಾಪಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಾರವಾರ ಬೀದಿ ಬದಿ ವ್ಯಾಪಾರಸ್ಥರು.

ಕರ್ನಾಟಕ ಎಕ್ಸ್ಪ್ರೆಸ್ ಟ್ರೈನ್ ಅಪಘಾತ. 11 ಪ್ರಯಾಣಿಕರ ದುರ್ಮರಣ.

ಟೆಂಪೋ ಅಪಘಾತ. ಓರ್ವ ಸಾವು. ನಾಲ್ವರಿಗೆ ಗಾಯ.