ಕಾರವಾರ(Karwar): ಕವಿ, ಲೇಖಕ, ಚಿಂತಕ, ನಿರೂಪಕ ಹಾಗೂ ಕಾರವಾರ ತಾಲ್ಲೂಕಿನ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದ ಚಲನಶೀಲ ಶಿಕ್ಷಕರೂ ಜೊತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮನಸ್ಸಿನ ಲ.ಡಾ.ಗಣೇಶ ಎನ್ ಬಿಷ್ಟಣ್ಣನವರ ಇವರಿಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಬೆಸ್ಟ್ ಹೈಸ್ಕೂಲ್ ಟೀಚರ್ ಕಾರವಾರ ಕ್ಯಾಟಗೇರಿಯಲ್ಲಿ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎನ್ಹೆಲ್ಪ ಗ್ರುಪ್ ಬೆಂಗಳೂರು ಹಾಗೂ ಜೀನ್ಯೂಸ್ ಸುದ್ದಿ ವಾಹಿನಿ ಸಂಯುಕ್ತವಾಗಿ ನಡೆಸಿದ ಸಮೀಕ್ಷೆಯಲ್ಲಿ ನಾಡಿನ 1162 ಶಿಕ್ಷಕರನ್ನು ಗುರುತಿಸಲಾಗಿತ್ತು. ಅದರಲ್ಲಿ ಉತ್ತಮ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ 68 ಶಿಕ್ಷಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗಿದೆ. ಅದರಲ್ಲಿ ಜಿ ಎನ್ ಬಿಷ್ಟಣ್ಣನವರ ಕೂಡಾ ಒಬ್ಬರು ಎಂದು ಎನ್ಹೆಲ್ಪ ಗ್ರುಪ್ ವ್ಯವಸ್ಥಾಪಕ ನಿರ್ದೇಶಕರಾದ ಫಯಾಜ್ ಖಾನ್ ತಿಳಿಸಿದರು.
ವರ್ಣರಂಜಿತ ಕಾರ್ಯಕ್ರಮದಲ್ಲಿ ಶಿವಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಯೋಗಿ ಮಹಾಸ್ವಾಮಿಗಳು ಚಲನಚಿತ್ರ ಖ್ಯಾತ ನಿರ್ದೇಶಕ ಸುನಿಲಕುಮಾರ ದೇಸಾಯಿ, ಚಲನಚಿತ್ರ ರಂಗದ ಪ್ರಸಿದ್ಧ ಗೀತರಚನೆಕಾರ ನಾಗೇಂದ್ರ ಪ್ರಸಾದ ಮಿಮಿಕ್ರಿ ಗೋಪಿ ಮತ್ತು ಚಲನಚಿತ್ರ ನಟ ಬಿಗ್ ಬಾಸ್ ಖ್ಯಾತಿಯ ರಾಕೇಶ ಅಡಿಗ ಉಪಸ್ಥಿತರಿದ್ದರು. ಕನ್ನಡ ನಾಡಿನ ಶ್ರೇಷ್ಠ ನಿರೂಪಕರಾದ ಅಧಿತಿ ಅಡಿಗ ಮತ್ತು ಮಾಹಿ ಸಮಾರಂಭವನ್ನು ನಿರೂಪಿಸಿದರು.
ಇದನ್ನು ಓದಿ,: ಶಾಲೆಯಲ್ಲಿ ಮೂರು ವರ್ಷದ ಮತ್ತೋರ್ವ ಬಾಲಕಿ ಹೃದಯಘಾತದಿಂದ ಸಾವು.
ಶಾಸಕ ಸತೀಶ ಸೈಲ್ ಅವರಿಂದ ಪೊಲೀಸ್ ಇಲಾಖೆಗೆ ಎರಡು ವಾಹನ ಹಸ್ತಾಂತರ.
ನಾಡದೋಣಿ ತಂದು ಪ್ರತಿಭಟಿಸಿದ ಸಾಂಪ್ರದಾಯಿಕ ಮೀನುಗಾರರು.