ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ (Yallapura): ತಾಲೂಕಿನ ಕಣ್ಣಿಗೇರಿ ಬಳಿ ಮತ್ತೊಂದು ಸರ್ಕಾರಿ ಬಸ್ ಅಪಘಾತವಾದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿ ಕೆಎಸ್ ಆರ್ ಟಿ ಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮವಾಗಿ 12 ಜನ ಗಾಯಗೊಂಡಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿಯ ಕ್ರಿಮ್ಸ್ ಗೆ ರವಾನಿಸಲಾಗಿದೆ. ಉಳಿದ ಗಾಯಾಳುಗಳು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಲ್ಲಾಪುರದಿಂದ ಸರ್ಕಾರಿ ಬಸ್ ಹಳಿಯಾಳ ಕಡೆ ತೆರಳುತಿತ್ತು. ಬಸ್ ನಲ್ಲಿ ಒಟ್ಟು 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೂರು ದಿನಗಳ ಹಿಂದೆ ಹೊನ್ನಾವರದಲ್ಲೂ ಕೂಡ ಸರ್ಕಾರಿ ಬಸ್ ಬ್ರೇಕ್ ಫೇಲಾಗಿ ಅಪಘಾತವಾಗಿತ್ತು. ಇದೀಗ ಸರ್ಕಾರಿ ಬಸ್ ಗಳ ಅಪಘಾತ ಮುಂದುವರಿದಿದೆ. ಅಧಿಕಾರಿಗಳು ಸರ್ಕಾರಿ ಬಸ್ ಗಳ ನಿರ್ವಹಣೆ ಮಾಡಬೇಕಾಗಿದೆ.
ಇದನ್ನು ಓದಿ : ಸಾಗುವಾನಿ ಮರ ಕಳ್ಳತನ. ಮೂವರ ಬಂಧನ.
ಅರಣ್ಯ ಸಿಬ್ಬಂದಿ ಮೇಲೆ ಹುಲಿ ದಾಳಿ.
ಹೊಸ ಅವತಾರದಲ್ಲಿ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಯತ್ನ.
ಒಂದೇ ದಿನ ಮೂರು ಬಾರೀ ಗುಡ್ಡ ಏರಿ ಇಳಿದ ಪರ್ವತಾರೋಹಿ.
ಮೀಟರ್ ಬಡ್ಡಿ, ಮೈಕ್ರೋಫೈನಾನ್ಸ್ ಅಬ್ಬರ ತಡೆಯಲು ಧೈರ್ಯದಿಂದ ಮುಂದೆ ಬನ್ನಿ. ಪೊಲೀಸ್ ಇಲಾಖೆ ಪ್ರಕಟಣೆ.