ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) :  ಉತ್ತರ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ, ಪ್ರಸ್ತುತ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ(Kota Srinivas Poojari) ಅವರ ಪ್ರಯತ್ನದಿಂದ ರೈಲ್ವೆ ಇಲಾಖೆ ಕೊಂಕಣ ರೈಲ್ವೆ(Konkan Railway) ಮಾರ್ಗದಲ್ಲಿ ಓಡಾಡುವ ಮತ್ಸ್ಯಗಂಧ ಎಕ್ಸ್ಪ್ರೆಸ್(Matsyagandha Express) ರೈಲಿಗೆ ಹೊಸ ಕೋಚ್ ಅಳವಡಿಸಲಾಗುತ್ತಿದೆ.

ಉತ್ತರಕನ್ನಡ(Uttarakannada) ಸೇರಿ ದೇಶದ ಪಶ್ಚಿಮ ಕರಾವಳಿಯ (western Karavali) ಪ್ರಮುಖ ಸಂಪರ್ಕದ ಕೊಂಡಿ ಮತ್ಸ್ಯಗಂಧ ಎಕ್ಸ್ಪ್ರೆಸ್‌ ರೈಲುಗಳಿಗೆ ((Matsyagandha Express Train) ಹೊಸ ಕೋಚ್‌ಗಳು ಜೋಡಣೆಯಾಗಲಿದೆ. ಬಳಿಕ ಫೆಬ್ರವರಿ 17 ರಿಂದ ಹೊಸ ಪ್ರಯಾಣವನ್ನು ಆರಂಭಿಸಲಿವೆ. ಅತ್ಯುನ್ನತ ಜರ್ಮನ್ ತಂತ್ರಜ್ಞಾನದಲ್ಲಿ(Germany Technology) ಎಲ್‌ಎಚ್‌ಬಿ ತಂತ್ರಜ್ಞಾನದಲ್ಲಿ ಕೋಚ್‌ಗಳನ್ನು ರಚಿಸಲಾಗಿದ್ದು  ಅವು ಆಕರ್ಷಕವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಧುನಿಕ ತಂತ್ರಜ್ಞಾನದ ಕೋಚ್‌ಗಳನ್ನು ಹೊಂದಿರುವ ಈ ರೈಲು ಅಪಘಾತವಾದರೂ ಜನರು ಸುರಕ್ಷಿತವಾಗಿರುತ್ತಾರೆ. ಯಾವುದೇ ಅಪಘಾತ ಸಂಭವಿಸಿದರೂ ಕೋಚ್‌ಗಳು ಪಲ್ಟಿ ಆಗದೆ, ಜಿಗ್‌ಜಾಗ್(ZigZag)  ರೀತಿಯಲ್ಲಿ ವರ್ಗೀಕರಿಸಿ ನಿಂತುಬಿಡುತ್ತದೆ. ಈ ಹೊಸ ಕೋಚ್‌ನ ರೈಲಲ್ಲಿ ಶಬ್ದದ ಸಮಸ್ಯೆ ಕಡಿಮೆ.   ಶೌಚಗೃಹ ವ್ಯವಸ್ಥೆಯೂ ಸಂಪೂರ್ಣವಾಗಿ ಬದಲಾಗಿದ್ದು ಆಧುನಿಕ ಶೈಲಿಯನ್ನು ಅಳವಡಿಸಲಾಗಿದೆ.

ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್(Lokamanya Tilak Terminal)  ಹಾಗೂ ಮಂಗಳೂರು ಸೆಂಟ್ರಲ್(Mangluru Central) ನಡುವೆ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು (Matsyagandha Express) (12620/12619) ಓಡಾಟ ನಡೆಸುತ್ತದೆ. ಕರಾವಳಿಯ ಪ್ರಮುಖ 22 ನಿಲ್ದಾಣಗಳನ್ನು ಇದು ಹಾದು ಪ್ರತಿ ದಿನ ಕನಿಷ್ಠ 1 ಸಾವಿರ ಜನರು ಈ ರೈಲಿನಲ್ಲಿ ಸಂಚರಿಸಲಿದ್ದಾರೆ.  2ಟೈರ್ ಎಸಿ 2ಬೋಗಿಗಳು, 3ಟೈರ್ ಎಸಿಯ-4, ಇಕಾನಮಿ ಕ್ಲಾಸ್ ಬೋಗಿಗಳು 4, 8 ಸ್ಲೀಪರ್ ನಾಲ್ಕು ಜನರಲ್ ಸೇರಿ ಒಟ್ಟು 23 ಬೋಗಿಗಳು ಮತ್ಸ್ಯಗಂಧ ಎಕ್ಸ್ಪ್ರೆಸ್‌ನ ಎರಡು ರೈಲುಗಳಿಗಿವೆ.

ಅಂದಿನ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ವಿಶೇಷ ಕಾಳಜಿಯಿಂದ 1998 ರ ಮೇ 1 ರಂದು ಮುಂಬೈ(Mumbai), ಮಂಗಳೂರು(Mangaluru) ನಡುವೆ ಮತ್ಸ್ಯಗಂಧ ರೈಲು  ಆರಂಭಗೊಂಡಿತು. ಗೋವಾ(Goa), ಮಹಾರಾಷ್ಟ್ರದ(Maharashtra) ಜತೆ ನಿಕಟ ಸಂಪರ್ಕ ಹೊಂದಿರುವ ದಕ್ಷಿಣ ಕನ್ನಡ(Dakshinakannada), ಉಡುಪಿ(Udupi) ಹಾಗೂ ಉತ್ತರ ಕನ್ನಡ(Uttarakannada) ಜನರ ನಿರಂತರ ಓಡಾಟದ ರೈಲು ಇದಾಗಿದ್ದು, ಜಿಲ್ಲೆಯ ಬಹುತೇಕ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿತ್ತು. ಇದರಿಂದ ಮತ್ಸ್ಯಗಂಧ ರೈಲಿನ ಜತೆ ಕರ್ನಾಟಕ ಕರಾವಳಿಯ ಜನ ಭಾವನಾತ್ಮಕ ಸಂಬಂಧ ಹೊಂದಿದ್ದರು. 28 ವರ್ಷಗಳಿಂದ ಅದೇ ರೈಲು ಬೋಗಿಗಳು ಓಡಾಟ ನಡೆಸಿವೆ. ಅವು ಸಾಕಷ್ಟು ಹಳೆಯದಾಗಿದ್ದು, ಶಿಥಿಲವಾಗಿದ್ದವು. ಇಂಜಿನ್ ಕೂಡ ಹಾಳಾಗಿ ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿತ್ತು. ಇತ್ತೀಚೆಗೆ ಇಂಜಿನ್‌ನ್ನು ಇಲೆಕ್ಟ್ರಿಕ್ ಲೋಕೋಮೋಟಿವ್‌ಗೆ ಬದಲಾಯಿಸಲಾಗಿದೆ. ಈಗ ಕೋಚ್‌ಗಳನ್ನೂ ಬದಲಾಯಿಸಲಾಗುತ್ತಿದೆ.

ಪ್ರಯಾಣಿಕರ ಮನವಿ ಮೇರೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್(Railway minister Ashin Vaishnav) ಹಾಗೂ ರಾಜ್ಯ ಸಚಿವ ವಿ.ಸೋಮಣ್ಣ(V Somanna) ಅವರ ಗಮನಕ್ಕೆ ತಂದು ಈಗ ಕೋಚ್‌ಗಳನ್ನು ಬದಲಾಯಿಸಲು ಸಚಿವರು ಆದೇಶ ಮಾಡಿದ್ದಾರೆ. ತುಂಬಾ ಖುಷಿಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ(Mp Kota Srinivas Poojari)  ಹೇಳಿದ್ದಾರೆ.

ಇದನ್ನು ಓದಿ : ಒಂದೇ ದಿನ ಮೂರು ಬಾರೀ ಗುಡ್ಡ ಏರಿ ಇಳಿದ ಪರ್ವತಾರೋಹಿ.

ಮೀಟರ್ ಬಡ್ಡಿ, ಮೈಕ್ರೋಫೈನಾನ್ಸ್ ಅಬ್ಬರ ತಡೆಯಲು  ಧೈರ್ಯದಿಂದ ಮುಂದೆ ಬನ್ನಿ. ಪೊಲೀಸ್ ಇಲಾಖೆ ಪ್ರಕಟಣೆ.

ಪ್ರಯಾಗರಾಜ್ ನಲ್ಲಿ ಪವಿತ್ರ ಸ್ನಾನ ಮಾಡಿದ ಡಿ ಕೆ ಶಿವಕುಮಾರ. ವ್ಯವಸ್ಥೆ ಬಗ್ಗೆ ಮೆಚ್ಚುಗೆ.

ಗಾಳ ಹಾಕಿ ಮೀನು ಹಿಡಿದ ಹವ್ಯಾಸಿಗಳ ದಂಡು. ಸಖತ್ ಫಿಶಿಂಗ್.

ಗೃಹ ರಕ್ಷಕ ಇಲಾಖೆಗೆ  ನೇಮಕಾತಿಗೆ ಅರ್ಜಿ ಆಹ್ವಾನ