ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)  ಶಿರಸಿ (Sirsi):  ತಾಲೂಕಿನ ಶಿವಳ್ಳಿ ಗ್ರಾಮದ (Shivalli Village) ಅನಧಿಕೃತವಾಗಿ ಸಾಗವಾನಿ ಜಾತಿಯ ಮರವನ್ನು ಕಡಿದ ಆರೋಪದ ಮೇಲೆ ಮೂವರನ್ನ ಬಂಧಿಸಲಾಗಿದೆ.

ಬೋಪ್ಪಾನಳ್ಳಿಯ ಮಂಜುನಾಥ ಕೃಷ್ಣ ಮೋಗೇರ (39), ಕೃಷ್ಣ ರಾಮಚಂದ್ರ ಪಟಗಾರ (33) ವರ್ಷ ದಾಸನಕೊಪ್ಪದ ಶಾಂತಪ್ಪ ರಾಮಣ್ಣ ತಳವಾರ (45) ಅವರನ್ನ ವಶಕ್ಕೆ ಪಡೆಯಲಾಗಿದೆ.

ಖಚಿತ ಮಾಹಿತಿ ಮೇರೆಗೆ ಶಿರಸಿ ವಿಭಾಗದ(Dirsi Division) ಉಪ ಅರಣ್ಯ ಸಂರಕ್ಷಣಾಧಿಕಾರಿ  (DFO) ಡಾ|| ಅಜ್ಜಯ್ಯ  ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಎಸ್. ಎಸ್. ನಿಂಗಾಣಿ  ಇವರ ಮಾರ್ಗದರ್ಶನದಲ್ಲಿ ಬನವಾಸಿ ವಲಯ ಅರಣ್ಯಧಿಕಾರಿ (RFO)  ಭವ್ಯಾ ನಾಯ್ಕ ನೇತೃತ್ವದಲ್ಲಿ ಸ್ಥಳ ಪರಿಶೀಲಿಸಿ ಸಾಗವಾನಿ ಜಾತಿಯ 4 ತುಂಡುಗಳನ್ನು ಜಪ್ತಿ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ಕಾರ್ತಿಕ್ ನಾರ್ವೆಕರ್ (ಉಪ ವಲಯ ಅರಣ್ಯಾಧಿಕಾರಿ, ಎಕ್ಕಂಬಿ  ಶಾಖೆ,  ಗಸ್ತು ಅರಣ್ಯ ಪಾಲಕರಾದ  ಮಲ್ಲಿಕಾರ್ಜುನ ಗುದಗಿ , ಭೋಜು ಚವ್ಹಾಣ  ಹಾಗೂ ಸಿಬ್ಬಂದಿಗಳಾದ  ಶ್ರೀಧರ ನಾಯ್ಕ ವಾಹನ ಚಾಲಕ ನವೀನ ನಾಯ್ಕ  ಪಾಲ್ಗೊಂಡಿದ್ದರು.

ಇದನ್ನು ಓದಿ : ಅರಣ್ಯ ಸಿಬ್ಬಂದಿ ಮೇಲೆ ಹುಲಿ ದಾಳಿ.

ಹೊಸ ಅವತಾರದಲ್ಲಿ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಯತ್ನ.

ಒಂದೇ ದಿನ ಮೂರು ಬಾರೀ ಗುಡ್ಡ ಏರಿ ಇಳಿದ ಪರ್ವತಾರೋಹಿ.

ಮೀಟರ್ ಬಡ್ಡಿ, ಮೈಕ್ರೋಫೈನಾನ್ಸ್ ಅಬ್ಬರ ತಡೆಯಲು  ಧೈರ್ಯದಿಂದ ಮುಂದೆ ಬನ್ನಿ. ಪೊಲೀಸ್ ಇಲಾಖೆ ಪ್ರಕಟಣೆ.