ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಾವೇರಿ (Haveri) : ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯೊರ್ವ ಜೀವ ಪಡೆದುಕೊಂಡ ಪವಾಡದ (Miracle) ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಬಳಿ ನಡೆದಿದೆ.
47 ವರ್ಷದ ಬಿಷ್ಟಪ್ಪ ಗುಡಿಮನಿ ಮರು ಜೀವ ಪಡೆದುಕೊಂಡವನು. ಶಿಗ್ಗಾಂವಿ ತಾಲೂಕಿನ(Shiggavi Taluku) ಬಂಕಾಪುರದ(Bankapura) ಬಿಷ್ಟಪ್ಪ ಕೆಲವು ದಿನಗಳ ಹಿಂದೆ ಜಾಂಡೀಸ್ ಹೆಚ್ಚಾಗಿ ಅಸ್ವಸ್ಥನಾಗಿದ್ದ. ಚಿಕಿತ್ಸೆಗೆ ಸ್ಪಂದಿಸದ ಈತ ನಿನ್ನೆ ಮೃತಪಟ್ಟಿದ್ದಾನೆಂದು ವೈದ್ಯರು ಹೇಳಿದ್ದರು. ಹೀಗಾಗಿ ಕುಟುಂಬಸ್ಥರು ಆ್ಯಂಬುಲೆನ್ಸ್ (Ambulance) ಮೂಲಕ ಮೃತದೇಹ ಶವ ತೆಗೆದುಕೊಂಡು ಹೊರಟಿದ್ದರು.
ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಶ್ರದ್ಧಾಂಜಲಿ ಬ್ಯಾನರ್ ಗ್ರಾಮದಲ್ಲಿ ಹಾಕಲಾಗಿತ್ತು.
ಆ್ಯಂಬುಲೆನ್ಸ್ ನಲ್ಲಿ ವಾಪಾಸ್ ಹೋಗುವಾಗ ಗುಡಿಮನಿಯ ಕುಟುಂಬಸ್ಥರು ರೋಧಿಸುತ್ತಿದ್ದರು. ಮಾರ್ಗ ಮಧ್ಯೆ ಹೋಗುತ್ತಿದ್ದಾಗ ಗುಡಿಮನಿ ಅವರು ತುಂಬಾ ಇಷ್ಟಪಡುತ್ತಿದ್ದ ಡಾಬಾ ಕಂಡ ಕೂಡಲೇ, ಸಂಬಂಧಿಯೊಬ್ಬರು ‘ನೋಡೋ.. ನಿನ್ನಿಷ್ಟದ ಡಾಬಾ, ಏಳೋ ಊಟ ಮಾಡು’ ಎನ್ನುತ್ತಾ ಗೋಳಾಡಿದರು. ಆಗ ಮಾತು ಕೇಳುತ್ತಲೇ ಶವವಾಗಿ ಮಲಗಿದ್ದ ಗುಡಿಮನಿ ಕಣ್ಣುಬಿಟ್ಟಿದ್ದಾರೆ. ಏಳಲು ಪ್ರಯತ್ನಿಸಿದ್ದಾರೆ. ಆಗ ಆ್ಯಂಬುಲೆನ್ಸ್ ನಲ್ಲಿದ್ದ ಸಂಬಂಧಿಕರು ಅವಕ್ಕಾಗಿದ್ದಾರೆ. ಕೆಲವರು ಗಾಬರಿಯಿಂದ ಕೂಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಬಿಷ್ಟಪ್ಪ ಬದುಕಿರುವುದು ಗೊತ್ತಾಗಿ ಖುಷಿ ಪಟ್ಟಿದ್ದಾರೆ. ಬಳಿಕ ಶಿಗ್ಗಾಂವಿ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಿದ್ದಾರೆ.
ಇದನ್ನು ಓದಿ : ಮತ್ತೊಂದು ಸರ್ಕಾರಿ ಬಸ್ ಮರಕ್ಕೆ ಡಿಕ್ಕಿ.ಪ್ರಯಾಣಿಕರಿಗೆ ಗಾಯ
ಸಾಗುವಾನಿ ಮರ ಕಳ್ಳತನ. ಮೂವರ ಬಂಧನ.
ಅರಣ್ಯ ಸಿಬ್ಬಂದಿ ಮೇಲೆ ಹುಲಿ ದಾಳಿ.
ಹೊಸ ಅವತಾರದಲ್ಲಿ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಯತ್ನ.