ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಉತ್ತರಕನ್ನಡ(Uttarakannada) ಜಿಲ್ಲೆಯ ಸಿದ್ದಾಪುರದ ಹಾರ್ಸಿಕಟ್ಟಾದ(Siddapura Harsikatta) ಉದಯೋನ್ಮುಖ ಹುಡುಗ ರಾಮನಾಥ ಶಾನಭಾಗ ಹಾಗೂ ಅವರ ತಂಡ ಮಾಡಿದ ಬಹು ನಿರೀಕ್ಷಿತ ಸಿನೆಮಾ ಪ್ರತ್ಯರ್ಥ  ಸಿನಿಮಾ(Pratyartha Cinema) ಇದೇ ಬರುವ ಫೆ 28 ಕ್ಕೆ ತೆರೆ(Release) ಕಾಣಲಿದೆ.

ಅಮಲಮಲೆ ಎಂಬ *Lyrical video* ಇಂದು ಬಿಡುಗಡೆಗೊಂಡಿದೆ. ಸಿನೆಮಾವೂ ಕನ್ನಡದ ಪ್ರಸಿದ್ದ ಸಿನೆಮಾದಲ್ಲಿ ನಟಿಸಿದ ಕಲಾವಿದರಿದ್ದು, ಕರಾವಳಿ ಮಲೆನಾಡು ಭಾಗದಲ್ಲಿ ಚಿತ್ರೀಕರಣಗೊಂಡಿರೋದು ವಿಶೇಷವಾಗಿದೆ. ಸಿನಿ ಪ್ರಿಯರು ಚಿತ್ರವನ್ನು ನೋಡಿ ಹಾರೈಸಿ ಹಾಗೂ ಅವರ ಶ್ರಮ- ಪ್ರತಿಭೆಗೆ ಒಂದು ಮೆಚ್ಚುಗೆ ಕೊಟ್ಟು ಯುವ ಪ್ರತಿಭೆಯನ್ನ ಪ್ರೋತ್ಸಾಹಿಸೋಣ.

ಕಾರ್ಕಳ ಶಾಸಕ(Karkal MLA) ವಿ. ಸುನಿಲ್ ಕುಮಾರ್(V Sunilkumar) ‘ಪ್ರತ್ಯರ್ಥ’ ಚಿತ್ರತಂಡಕ್ಕೆ ಶುಭವನ್ನು ಕೋರಿದ್ದಾರೆ. ಪ್ರತ್ಯರ್ಥ ಕನ್ನಡ ಚಲನಚಿತ್ರ ಇದೇ ಫೆಬ್ರವರಿ 28ಕ್ಕೆ ಬಿಡುಗಡೆಯಾಗಲಿದೆ. ಕಾರ್ಕಳದ ಜನತೆ ಇದು ನಮ್ಮ ಊರಿನ ಸಿನೆಮಾ ಎಂದು ಹೆಮ್ಮೆಯಿಂದ ಇತರರಿಗೆ ಹೇಳಿಕೊಳ್ಳುವ ಸಿನಿಮಾ ಇದಾಗಿರುತ್ತದೆ ಎಂದು ಪ್ರತ್ಯರ್ಥ ಚಿತ್ರತಂಡವು ಆಶ್ವಾಸನೆಯನ್ನು ನೀಡಿದ್ದು, ಶಾಸಕರಾದ ವಿ ಸುನಿಲ್ ಕುಮಾರ್ ಅವರು ಚಿತ್ರತಂಡಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.


ಇದನ್ನು ಓದಿ : ತಹಸೀಲ್ದಾರ ಕಚೇರಿಯಲ್ಲಿ ಸಾರ್ವಜನಿಕ ಎದುರೇ ಡಿಶುಮ್ ಡಿಶುಮ್.

ಕಾರವಾರ ಅಂಕೋಲಾದಲ್ಲಿ ಎನ್ ಎ ಐ ಬೇಟೆ. ಇಬ್ಬರು ಲಾಕ್

ಒಂದೇ ರೂಪಾಯಿಗೆ ನಡೆಯಿತು ಮದುವೆ. ವೈದ್ಯ ದಂಪತಿಗಳಿಂದ ಸಮಾಜಕ್ಕೆ ಸಂದೇಶ

ಭಟ್ಕಳದ ಸಂಜನಾ ನಾಯ್ಕಗೆ ಮಿಸ್  ಗ್ರಾಂಡ್ ಸೌತ್ ಇಂಡಿಯಾ ಪ್ಯಾಶನ್ ಶೋ ಕಿರೀಟ.