ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಮಂಗಳೂರು(Manglore):  ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯ(Shrinivasa University) ಏಳನೆಯ ವಾರ್ಷಿಕ ಘಟಕೋತ್ಸವದಲ್ಲಿ ಕಾರವಾರದ ಇಬ್ರಾಹಿಂ ಕಲ್ಲೂರ್‌(Ibrahim Kalluru) ಅವರ ಪುತ್ರಿ  ಡಾ. ಶಿಫಾನಾ ಬೇಗಂರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಲಾಯಿತು.

ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಸಿ.ಎ. ರಾಘವೇಂದ್ರ ಅವರು  ಇದೇ ಸಂದರ್ಭದಲ್ಲಿ ‘ಬೆಸ್ಟ್ ಪೇಪರ್ ಅವಾರ್ಡ್’ ಮಾಸಾ ಯುನಿವರ್ಸಿಟಿ, ಮಲೇಷಿಯಾ ಪ್ರಶಸ್ತಿಯನ್ನು ಸಹ ಶಿಫಾನಾ ಅವರಿಗೆ ನೀಡಿ  ಸನ್ಮಾನಿಸಿದರು. ಸದ್ಯ ಶ್ರೀನಿವಾಸ್ ಇಂಜಿನಿಯರಿಂಗ್(Shrinivas Engineering) ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ (Computer Science) ವಿಭಾಗದಲ್ಲಿ ಮುಖ್ಯಸ್ಥೆಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ವಿ.ವಿ. ಆಡಳಿತ ಮಂಡಳಿ, ಟ್ರಸ್ಟ್ ಸದಸ್ಯರಾದ ಪ್ರೊ. ಎ. ಮಿತ್ರ ಎಸ್. ರಾವ್, ಎ. ವಿಜಯಲಕ್ಷ್ಮೀ ಎ. ರಾವ್, ಮೌಲ್ಯಮಾಪನ ಕುಲಸಚಿವ ಡಾ. ಶ್ರೀನಿವಾಸ್ ಮಯ್ಯ ಡಿ.. ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ಆದಿತ್ಯಕುಮಾರ್ ಮಯ್ಯ ಹಾಗು ವಿ.ವಿ.ಯ ವಿವಿಧ ಡೀನ್‌ಗಳು ಉಪಸ್ಥಿತರಿದ್ದರು.

ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಶಿಫಾನಾ ಬೇಗಂ ಅವರು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪಡೆದಿದ್ದಾರೆ, ಘಟಿಕೋತ್ಸವ ಕಾರ್ಯಕ್ರಮ ಸಂದರ್ಭದಲ್ಲಿ ಅವರು ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.

ಡಾ. ಶಿಫಾನಾ  ಬೇಗಂ ಅವರು ಪಿಎಂಜೆಎಫ್ ಲಯನ್ ಹಾಗೂ ಕಾರವಾರದ ಕಲ್ಲೂರ್ ಎಜುಕೇಶನ್ ಟ್ರಸ್ಟ್ (Kalluru Education Trust) ಅಧ್ಯಕ್ಷರಾದ  ಡಾ.ಇಬ್ರಾಹಿಂ ಕಲ್ಲೂರ್ ಅವರ ಪುತ್ರಿಯಾಗಿದ್ದಾರೆ. ಮಗಳಾ ಸಾಧನಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಕಾರವಾರ ಅಂಕೋಲಾದಲ್ಲಿ ಎನ್ ಎ ಐ ಬೇಟೆ. ಇಬ್ಬರು ಲಾಕ್

ಒಂದೇ ರೂಪಾಯಿಗೆ ನಡೆಯಿತು ಮದುವೆ. ವೈದ್ಯ ದಂಪತಿಗಳಿಂದ ಸಮಾಜಕ್ಕೆ ಸಂದೇಶ

ಭಟ್ಕಳದ ಸಂಜನಾ ನಾಯ್ಕಗೆ ಮಿಸ್  ಗ್ರಾಂಡ್ ಸೌತ್ ಇಂಡಿಯಾ ಪ್ಯಾಶನ್ ಶೋ ಕಿರೀ