ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡ(Mundgod): ಕ್ಷುಲ್ಲಕ ಕಾರಣಕ್ಕಾಗಿ ಉಪ ತಹಶೀಲ್ದಾರ್ (Deputy Tahasildar)ಮತ್ತು ಕಂದಾಯ ನಿರೀಕ್ಷಕರಿಬ್ಬರು (Revenue Inspector) ಹೊಡೆದಾಡಿಕೊಂಡ ಘಟನೆ ಮುಂಡಗೋಡು ತಹಸೀಲ್ದಾರ(Mundgod Tahasildar) ಕಚೇರಿಯಲ್ಲಿ ನಡೆದಿದೆ.

ಮಂಗಳವಾರ ಸಾರ್ವಜನಿಕರ ಎದುರೇ ಕಂದಾಯ ನಿರೀಕ್ಷಿಕ ವಿಕ್ರಮಸಿಂಗ್ ರಜಪೂತ ಎಂಬುವವರು  ಉಪತಹಸೀಲ್ದಾರ್ ಜಿ.ಬಿ.ಭಟ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಕಂದಾಯ ಇಲಾಖೆಯಿಂದ  ಸಾರ್ವಜನಿಕರಿಗೆ ನೀಡುವ ಪ್ರಮಾಣ ಪತ್ರಗಳಿಗೆ  ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನೀರಿಕ್ಷಕರು ದಾಖಲೆಗಳ ಪರಿಶೀಲಿಸಿ ವರದಿ ಬರೆದು ತಹಸೀಲ್ದಾರ ಕಚೇರಿಗೆ (Tahasildar Office) ಕಳುಹಿಸಬೇಕು. ಆದರೆ ಕೆಲವು ಬಾರಿ ಕಂದಾಯ ನಿರೀಕ್ಷಕ ವಿಕ್ರಮಸಿಂಗ್  ಸರಿಯಾಗಿ ಪರಿಶೀಲನಾ ವರದಿ ನೀಡುತ್ತಿಲ್ಲ ಎನ್ನಲಾಗಿದೆ. ಈ ಕುರಿತು ಉಪತಹಸೀಲ್ದಾರ್ ಜಿ.ಬಿ.ಭಟ್ ಅವರು ಕಂದಾಯ ನಿರೀಕ್ಷಕಗೆ ಪೊನ್ ಕರೆ ಮಾಡಿ ವರದಿಯನ್ನು ಸರಿಯಾಗಿ ನೀಡುತ್ತಿಲ್ಲ ಯಾಕೆ? ಎಂದು ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರು ಅವಾಚ್ಯವಾಗಿ ಬೈದಾಡಿಕೊಂಡಿದ್ದಾರೆ. ನಂತರ ತಹಸೀಲ್ದಾರ್ ಕಚೇರಿಗೆ ಬಂದ ಕಂದಾಯ  ವಿಕ್ರಮಸಿಂಗ್ ಉಪತಹಸೀಲ್ದಾರ್ ಜಿ.ಬಿ.ಭಟ್‌ ಅವರ ಮೇಲೆ ಕೈ ಮಾಡಿದ್ದಾರೆನ್ನಲಾಗಿದೆ. ಈ ವೇಳೆ ಜಿ.ಬಿ.ಭಟ್ ಸಹ ಕಂದಾಯ ನಿರೀಕ್ಷಕಗೆ ತಿರುಗಿ ಬಿಟ್ಟಿದ್ದಾರೆನ್ನಲಾಗಿದೆ. ಕಚೇರಿಯಲ್ಲಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಜಗಳ ಬಿಡಿಸಿದ್ದಾರೆ.

ಇಬ್ಬರು ಅಧಿಕಾರಿಗಳು ಸಾರ್ವಜನಿಕರ ಮುಂದೆ ಹೊಡೆದಾಡಿಕೊಳ್ಳುವ ಸಂದರ್ಭದಲ್ಲಿ  ಕಚೇರಿಯ ಕೆಲ ಸಿಬ್ಬಂದಿಗಳು ಇಬ್ಬರನ್ನು ಕರೆದು ರಾಜಿ ಸಂಧಾನ ಮಾಡಲು ಪ್ರಯತ್ನ ನಡೆಸಿದ್ದಾರೆ. ಈ ರೀತಿಯಾಗಿ ಕಚೇರಿ ಸಮಯದಲ್ಲಿ   ಸಾರ್ವಜನಿಕರ ಎದುರು  ಹೊಡೆದಾಡಿಕೊಳ್ಳುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಈ ಬಗ್ಗೆ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ (MLA Shivaram Hebbar), ಕಂದಾಯ ಇಲಾಖೆಯ ಸಿಬ್ಬಂದಿಗಳು ಏನೇ ಸಮಸ್ಯೆಗಳಿದ್ದರು ತಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಗೆ ಹರಿಸಿಕೊಳ್ಳಬೇಕು. ಅದು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವ  ಯಾರಿಗೂ ಅಧಿಕಾರವಿಲ್ಲ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಎಸಿ ಹಾಗೂ ತಹಸೀಲ್ದಾರ್‌ಗೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ.

ಒಟ್ಟಾರೆ ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳು ಘಟನೆ ಬಗ್ಗೆ ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು.

ಇದನ್ನು ಓದಿ : ಕಾರವಾರ ಅಂಕೋಲಾದಲ್ಲಿ ಎನ್ ಎ ಐ ಬೇಟೆ. ಇಬ್ಬರು ಲಾಕ್

ಒಂದೇ ರೂಪಾಯಿಗೆ ನಡೆಯಿತು ಮದುವೆ. ವೈದ್ಯ ದಂಪತಿಗಳಿಂದ ಸಮಾಜಕ್ಕೆ ಸಂದೇಶ

ಭಟ್ಕಳದ ಸಂಜನಾ ನಾಯ್ಕಗೆ ಮಿಸ್  ಗ್ರಾಂಡ್ ಸೌತ್ ಇಂಡಿಯಾ ಪ್ಯಾಶನ್ ಶೋ ಕಿರೀಟ.

ಸ್ವಚ್ಛ ಅಘನಾಶಿನಿಗೆ ಭಕ್ತಿಯ ಆರತಿ. ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು ಯುವಾ ಬ್ರಿಗೇಡ್.