ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal):  ತಾಲೂಕಿನ  ಹೆಬ್ಳೆ ಗ್ರಾಮ ಪಂಚಾಯತ(Heble Grama Panchayat) ವ್ಯಾಪ್ತಿಯ ಕುಕನೀರ್‌ ವೆಂಕಟಾಪುರ ಹೊಳೆಯ ಬದಿಯಲ್ಲಿ ಗರ್ಭಿಣಿ ಆಕಳೊಂದನ್ನ(Cow) ಹತ್ಯೆಗೈದು ಮಾಂಸ ಕದ್ದು  ಅಂಗಾಂಗ ಮತ್ತು ಹೊಟ್ಟೆಯಲ್ಲಿರುವ ಕರುವಿನ ಬ್ರೂಣವನ್ನು ಎಸೆದು ಹೋದ ಘಟನೆ ಬೆಳಕಿಗೆ ಬಂದಿದೆ.

ದುಷ್ಕರ್ಮಿಗಳು ಜಾನುವಾರುವನ್ನ (Cattle) ಹತ್ಯೆ ಮಾಡಿ ಅಂಗಾಂಗಗಳನ್ನು ಗೋಣಿ ಚೀಲದಲ್ಲಿ  ಸುತ್ತಿ ಎಸೆದು ಹೋಗಿದ್ದಾರೆ. ಬೀದಿ ನಾಯಿಯೊಂದು(Street Dog) ಚೀಲವನ್ನು ಹರಿಯುವ ವೇಳೆ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು  ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ(Bhatkal Rural Station) ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಿದ್ದಾರೆ.

ಕಳೆದ ಜನವರಿ ತಿಂಗಳಲ್ಲಿ ಇದೆ ತರಹದ ಘಟನೆ ಹೊನ್ನಾವರದ ಸಾಲ್ಕೋಡು ಬಳಿ ನಡೆದಿತ್ತು. ರಾಜ್ಯದಲ್ಲಿಯೇ ಪ್ರಕರಣ ಸದ್ದು ಮಾಡಿತ್ತು. ಇದೀಗ ಭಟ್ಕಳದಲ್ಲಿ  ಅಂತಹದ್ದೇ ಘಟನೆ ಬೆಳಕಿಗೆ ಬಂದಿದ್ದು ಗೋ ಪ್ರೇಮಿಗಳು ಆತಂಕ ಪಡುವಂತಾಗಿದೆ.

ಇದನ್ನು ಓದಿ : ನಕಲಿ ನೋಟುಗಳ ವಾರಸುದಾರ ಪೊಲೀಸ್ ಬಲೆಗೆ.

ಜಾನುವಾರುಗಳ ಅಕ್ರಮ ಸಾಗಾಟ ಪತ್ತೆ ಹಚ್ಚಿದ ಪೊಲೀಸರು. ಭಟ್ಕಳಕ್ಕೆ ಸಾಗಿಸುತ್ತಿದ್ದ ವೇಳೆ ದಾಳಿ.

ರಾಷ್ಟ್ರೀಯ ಮೀನುಗಾರ ಕಾರ್ಮಿಕ ವೇದಿಕೆಯಿಂದ ಲೋಕಸಭೆ ಅಧಿವೇಶನದ ವೇಳೆ  ಪ್ರತಿಭಟನೆ ಎಚ್ಚರಿಕೆ.

ಆನ್‌ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ. ಪಾನಿಪುರಿ ಜೊತೆ ಪಾಷಾಣ ತಿಂದ.