ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾವಣಗೆರೆ(Davanagere): ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಇದೀಗ ಹಾಡುಹಗಲೇ ಮತ್ತೋರ್ವ ರೌಡಿಶೀಟರ್(Roudisheeter) ನನ್ನ ಭೀಕರವಾಗಿ ಕೊಲೆ ಮಾಡಲಾಗಿದೆ.
ದಾವಣಗೆರೆ(Davanagere) ನಗರದ ಹದಡಿ ರಸ್ತೆಯ ಬಳಿಯ ಕ್ಲಬ್ ಒಂದರಲ್ಲಿ ಘಟನೆ ನಡೆದಿದೆ. ಸಂತೋಷ್ ಅಲಿಯಾಸ್ ಕಣುಮ(48) ಕೊಲೆಯಾದ ರೌಡಿಶೀಟರ್. ಸೋಮವಾರ ಸಂಜೆ ಸುಮಾರಿಗೆ ಈ ಘಟನೆ ನಡೆದಿದೆ. ರೌಡಿಶೀಟರ್ ಕೊಲೆಯ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆರರಿಂದ ಏಳು ಜನರ ಗ್ಯಾಂಗ್ ಮುಖಕ್ಕೆ ಪೆಪ್ಪರ್ ಸ್ಪ್ರೇ (Pepper Spray) ಮಾಡಿ ಕೇವಲ 37 ಸೆಕೆಂಡ್ ನಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾರೆ. ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೆ ವೈಶ್ಯಮ್ಯ ಮತ್ತು ಪಿಲ್ಡ್ ನಲ್ಲಿ ಹೆಸರು ಮಾಡುವ ಉದ್ದೇಶಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ವಿದ್ಯಾನಗರ ಪೊಲೀಸ್ ಠಾಣೆ(Vidyanagar Police station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನು ಓದಿ : ಪತಿಯ ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ
ಪುಟಾಣಿಗಳಿಂದ ಸ್ಕೆಟಿಂಗ್ ಮೂಲಕ ಶ್ರದ್ಧಾಂಜಲಿ. ನಮ್ಮ ಸೇನಾಪಡೆ ತಕ್ಕ ಉತ್ತರ ನೀಡಲಿದೆ : ಶಾಸಕ ಸೈಲ್.