ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೆಂಗಳೂರು (Bangaluru): ಕಾಶ್ಮೀರದ ಪಹಲ್ಗಾಮ್ ನಲ್ಲಿ(Pehalgam) ಆದ ಭಯೋತ್ಪಾದಕ ದಾಳಿಗೆ(Terror Attack) ಪ್ರತೀಕಾರ ತೀರಿಸಿಕೊಳ್ಳಲು ಭಾರತ ಹವಣಿಸುತ್ತಿದೆ. ಹೀಗಾಗಿ ದೇಶದ 244 ಕಡೆಗಳಲ್ಲಿ ಭರ್ಜರಿ ತಾಲೀಮು ನಡೆಯುತ್ತಿದೆ

ಮೇ ಏಳರಂದು ಕೇಂದ್ರ ಸರ್ಕಾರ(Central Goverement) ದೇಶಾದ್ಯಂತ ಮಾಕ್ ಡ್ರಿಲ್(MockDrill) ನಡೆಸಲು ಆದೇಶಿಸಿದೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಮಾಕ್ ಡ್ರಿಲ್ ಮಾಡಲಾಗುತ್ತಿದೆ. ಕರ್ನಾಟಕದ ಮೂರು ಕಡೆಗಳಲ್ಲಿ ಮಾಕ್ ಡ್ರಿಲ್ ನಡೆಸಲು ಕೇಂದ್ರದಿಂದ ಸೂಚನೆ ಬಂದಿದೆ.

ಬೆಂಗಳೂರು(Bangaluru), ಕಾರವಾರ(Karwar) ಮತ್ತು ರಾಯಚೂರಿನಲ್ಲಿ(Rayachuru) ಮಾಕ್ ಡ್ರಿಲ್ಗೆ ನಿರ್ಧರಿಸಲಾಗಿದೆ ಎಂದು ಅಗ್ನಿಶಾಮಕ ದಳದ(Fire Brigade) ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸುತ್ತೋಲೆ ಬರಲಿದೆ ಎಂದು ಅವರು ಹೇಳಿದ್ದಾರೆ.

ಅಣಕು ಕಾರ್ಯಾಚರಣೆಯಲ್ಲಿ ಎನ್ಸಿಸಿ(NCC), ಎನ್ಎಸ್ಎಸ್(NSS), ಸಿವಿಲ್ ಡಿಫೆನ್ಸ್(Civil Defence) ಮತ್ತು ವೈದ್ಯರು ಭಾಗಿಯಾಗುತ್ತಾರೆ. ಪೊಲೀಸ್ ಠಾಣೆ(Police Station), ಅಗ್ನಿಶಾಮಕ ದಳ ಠಾಣೆ ಸೇರಿ 35 ಕಡೆ ಸೈರನ್ ವ್ಯವಸ್ಥೆ ಇದೆ. ಅದರಲ್ಲಿ 32 ಕಡೆಗಳಲ್ಲಿ ಸೈರನ್ ಕಾರ್ಯ ನಿರ್ವಹಿಸುತ್ತಿವೆ. ಜನರು ಏನು ಮಾಡಬೇಕು, ಮಾಡಬಾರದು ಎಂಬ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸುವ ಸುತ್ತೋಲೆಯಲ್ಲಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ : ಶಾರ್ಟ್ ಸರ್ಕ್ಯೂಟ್ ನಿಂದ ಬ್ಯಾಂಕಿಗೆ ಬೆಂಕಿ. ಲಕ್ಷಾಂತರ ರೂ ವಸ್ತುಗಳು, ದಾಖಲೆಗಳು ಭಸ್ಮ.

Iಭಾರತ ಮತ್ತು ಪಾಕ್ ನಡುವೆ ಯುದ್ಧದ ಕಾರ್ಮೋಡ. ಏಳರಂದು ರಾಷ್ಟ್ರದ್ಯಾಂತ ಮಾಕ್ ಡ್ರಿಲ್.

ಉಡಾಪೆ ಮಾತಿಗೆ ಗಾಯಕ ಸೋನು ನಿಗಮ್ ಗೆ ಫಿಲ್ಮ್ ಚೇಂಬರ್ ಬ್ಯಾನ್.

ಮಂಗಳೂರು ಬಳಿಕ ಮತ್ತೋರ್ವ ರೌಡಿ ಶೀಟರ್ ಫಿನಿಷ್.