ಕುಮಟಾ : ತಾಲೂಕಿನ ಯಲವಳ್ಳಿ ಗ್ರಾಮದ ಮನೆಯೊಂದರಲ್ಲಿ 10 ಅಡಿಯ ಕಾಳಿಂಗ ಸರ್ಪ ಪತ್ತೆಯಾಗಿದೆ.
ಗಣೇಶ್ ಭಟ್ ಎಂಬುವವರ ಮನೆಯ ಅಡುಗೆ ಕೋಣೆಯಲ್ಲಿ ರಾತ್ರಿಯೇ ಕಾಳಿಂಗ ಸರ್ಪ ಬಂದು ಸೇರಿದೆ. ಬೆಳಿಗ್ಗೆ ಮನೆಯವರು ಟೀ ಮಾಡಲು ಅಡುಗೆ ಮನೆಗೆ ಬಂದಾಗ ಹಾವು ಕಂಡು ಗಾಬರಿಯಾದರು. ಮಿಕ್ಸರ್ ಮೇಲೆ ಸುರುಳಿ ಸುತ್ತಿ ಮಲಗಿದ ಕಾಳಿಂಗ ತನಗೆ ಇಲ್ಲೇ ಜಾಗ ಕೊಡಿ ಎಂದು ಹೇಳುವಂತಿತ್ತು.
ಕುಮಟಾದ ಉರಗ ಪ್ರೇಮಿ ಪವನ್ ನಾಯ್ಕ ಅವರಿಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ಧಾವಿಸಿ ಕಾಳಿಂಗ ರಕ್ಷಣೆ ಮಾಡಿದರು. ಮನೆಯವರ ಆತಂಕವನ್ನು ದೂರ ಮಾಡಿದರು. ಈ ಒಂದು ವಾರದಲ್ಲಿ ಪವನ್ ನಾಯ್ಕ ಮೂರು ಕಾಳಿಂಗ ಸರ್ಪವನ್ನ ರಕ್ಷಣೆ ಮಾಡಿದ್ದಾರೆ.