ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹುಬ್ಬಳ್ಳಿ (Hubbali) : ಯುವಕನೊಬ್ಬನನ್ನು ಚಾಕು ಇರಿದು ಕೊಲೆ ಮಾಡಿದ್ದ  ಮೂವರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡಿನ(Firing) ಉತ್ತರ ನೀಡಿದ ಘಟನೆ ನಡೆದಿದೆ.

ಹುಬ್ಬಳ್ಳಿಯ (Hubballi) ಲಿಂಗರಾಜನಗರ (Lingarajanagara) ರಸ್ತೆಯಲ್ಲಿನ ಗೋಲ್ಡನ್ ಹೈಟ್ಸ್‌ ಬಾರ್‌ನ ಪಾರ್ಕಿಂಗ್ ಸ್ಥಳದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಯುವಕನೊರ್ವನನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆಕಾಶ್ ವಾಲ್ಮೀಕಿ (24) ಎಂಬಾತನನ್ನು ಮೂವರು ಆರೋಪಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದ ಆಕಾಶ್ ಮೃತಪಟ್ಟಿದ್ದ.

ಇದಕ್ಕೆ ಸಂಬಂಧಪಟ್ಟಂತೆ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ(Vidyanagara Police Station) ದೂರು ದಾಖಲಾಗಿತ್ತು. ಅರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಆನಂದನಗರದ(Anandanagara) ನಿವಾಸಿ ಅಭಿಷೇಕ ಶಿರೂರ, ವಿನೋದ್ ಅಂಬಿಗೇರ, ಉಲ್ಲಪ್ಪ ಕೋಟಿ ಗುಂಡು ತಿಂದು ಬಂಧಿತ ಆರೋಪಿಗಳು. ಅವರನ್ನು ಕಿಮ್ಸ್ ಆಸ್ಪತ್ರೆಗೆ (KIMS Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.  ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದ್ದು ಪೊಲೀಸರು ತನಿಖೆ (Police Investigation) ನಡೆಸಿದ್ದಾರೆ.

ಇದನ್ನು ಓದಿ : ಬಿಗ್ ಬಾಸ್ ಗೆದ್ದ ಹನುಮಂತ ಹಣ ಏನು ಮಾಡ್ತಾರೆ ಗೊತ್ತಾ.

ಪ್ರತಿಷ್ಟಿತ ಶಾಲೆಗೆ ಬಾಂಬ್ ಬೆದರಿಕೆ. ದೌಡಾಯಿಸಿದ ಪೊಲೀಸರು..

ಪ್ರಮುಖ ಆರೋಪಿ ವಾಸಿಮ್ ವಲ್ಕಿಯವನಲ್ಲ. ಆತನನ್ನ ಹಿಡಿದುಕೊಟ್ಟವರಿಗೆ ಲಕ್ಷ ರೂ ಇನಾಮು.

ಮಹಾ ಕುಂಭಮೇಳಕ್ಕೆ ತೆರಳಲು ಸಬ್ಸಿಡಿ ದರದಲ್ಲಿ ಟಿಕೆಟ್.

ಫೆಬ್ರುವರಿ ಎರಡರಿಂದ ಐದರವರೆಗೆ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವರ ಪುನರ್ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ