ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ (Honnavar) : ತಾಲೂಕಿನ ಸಾಲ್ಕೋಡು ಕೊಂಡಾಕುಳಿಯಲ್ಲಿ (Salkodu Kondakuli) ಆದ ಗೋವಧೆ (Cattle Killed) ಪ್ರಕರಣದ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿರುವ ವಾಸಿಮ್ ವಲ್ಕಿ ಗ್ರಾಮದವನಲ್ಲ. ಆತ ಭಟ್ಕಳದವನು ಎಂದು ವಲ್ಕಿಯ ಜಮಾತ್ (Walki Jamat) ತಿಳಿಸಿದೆ. ಪ್ರಮುಖ ಆರೋಪಿ ವಾಸಿಮ್ ಹಿಡಿದುಕೊಟ್ಟರೆ ಲಕ್ಷ ರೂ ಬಹುಮಾನ ನೀಡುವುದಾಗಿ ಉದ್ಯಮಿ ಖಲೀಲ್ ಶೇಕ್ (Businessmen Khaleel Shekh) ತಿಳಿಸಿದ್ದಾರೆ.

ವಾಸಿಮ್ ಈ ಹಿಂದೆ ದನ ಕಳ್ಳತನದ(Cattle Theft) ಕೃತ್ಯ ನಡೆಸುತ್ತಿರೋದು ಹೊನ್ನಾವರ ಸುತ್ತಮುತ್ತಲ ಜನರಿಗೆ ಗೊತ್ತಿದೆ. 2020ರಲ್ಲಿ ಆತ ತನ್ನ ಕಾರಿನಲ್ಲಿ ಜಾನುವಾರು ಕಳ್ಳತನ ಮಾಡುತ್ತಿದ್ದಾಗ ಅಪಘಾತವಾಗಿತ್ತು. ಸ್ಥಳೀಯರು ಹೋಗಿ ನೋಡಿದಾಗ ಆತನ ಕರಾಳ ಮುಖ ತಿಳಿದಿತ್ತು. ಸ್ಥಳೀಯರು ಹಿಗ್ಗಾಮುಗ್ಗಾ ಬಾರಿಸಿ ತಿಳುವಳಿಕೆ ನೀಡಿದ್ದರು. ಆದರೆ ತನ್ನ ಚಾಳಿ ಬಿಡದ ವಾಸಿಮ್ ಹೊನ್ನಾವರ(Honnavar) ಸುತ್ತಮುತ್ತಲ ಗ್ರಾಮದಲ್ಲಿ ಜಾನುವಾರುಗಳ ಕಳ್ಳತನ ಮುಂದುವರಿಸಿದ್ದ. ಆಗ ಸರಿಯಾಗಿ ಶಿಕ್ಷೆ ನೀಡಿದ್ದರೆ ಈ ಮಟ್ಟಕ್ಕೆ ಆತ ಬರುತ್ತಿರಲಿಲ್ಲ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

ವಾಸಿಮ್ ಜೊತೆಗೆ ಬಿಹಾರ್ ಮೂಲದ(B8har Native) ಮುಜಾಮಿಲ್ ಎಂಬಾತ ಸೇರಿಕೊಂಡು ಗೋ ಕಳ್ಳತನ ಮತ್ತು ಹತ್ಯೆ ಕೃತ್ಯ ಮುಂದುವರಿಸಿದ್ದರು. ಆದರೆ ವಾಸಿಮ್ ಮತ್ತು ಮುಜಾಮಿಲ್ ಇಬ್ಬರು ಇಲ್ಲಿಯವರಲ್ಲ. ಕೆಲ ದಿನಗಳ ಹಿಂದೆ ಈ ಭಾಗದಲ್ಲಿ ಕಾಣಿಸಿಕೊಂಡಿರುವ ವಾಸಿಮ್ ಮತ್ತು ಮುಜಾಮಿಲ್ ಸಾಲ್ಕೋಡು ಕೊಂಡಾಕುಳಿಯಲ್ಲಿ ಗೋ ಹತ್ಯೆ ಮಾಡಿದ್ದಾರೆ. ಅವರಿಗೆ ತಕ್ಕ ಶಿಕ್ಷೆ ಆಗಬೇಕು. ಅವರನ್ನ ಹಿಡಿದುಕೊಟ್ಟವರಿಗೆ ಒಂದು ಲಕ್ಷ ರೂ ಇನಾಮು ನೀಡುವುದಾಗಿ ಉದ್ಯಮಿ ಖಲೀಲ್ ಶೇಕ್ ಘೋಷಿಸಿದ್ದಾರೆ.

ಈ ಭಾಗದಲ್ಲಿ ಹಿಂದು ಮುಸ್ಲಿಂ ಧರ್ಮಿಯರು ಪರಸ್ಪರ ಸೌಹಾರ್ದತೆಯಿಂದ ಇದ್ದಾರೆ. ಆದರೆ ಗೋಹತ್ಯೆ ಪ್ರಕರಣದಿಂದಾಗಿ ವಾತಾವರಣ ಹದಗೆಡುವ ಪರಿಸ್ಥಿತಿಯನ್ನ ವಾಸಿಮ್ ಮತ್ತು ಮುಜಾಮಿಲ್ ತಂದಿದ್ದಾರೆ ಎಂದು ವಲ್ಕಿಯ ಜಮಾತ್(Walki Jamat) ಬೇಸರ ವ್ಯಕ್ತಪಡಿಸಿದೆ.

ಇದನ್ನು ಓದಿ : ಕೂದಲೆಳೆ ಅಂತರದಲ್ಲಿ ಆರೋಪಿಗಳು ಎಸ್ಕೇಪ್. ಸುಳಿವು ನೀಡಿದವರಿಗೆ ಸಿಗಲಿದೆ 50ಸಾ.ರೂ. ಬಹುಮಾನ.

ಕಿಂಗ್ ಇಸ್ ಬ್ಯಾಕ್. ಬೆಂಗಳೂರಲ್ಲಿ ನಸುನಗುತ್ತಾ ಮಾತನಾಡಿದ ಶಿವಣ್ಣ.

ಬಿಗ್ ಬಾಸ್ ಕಿರೀಟ ತೊಟ್ಟು ಐತಿಹಾಸಿಕ ದಾಖಲೆ ಬರೆದ ಹನುಮಂತ.

ಕುಂಭಮೇಳದಲ್ಲಿ ಭಾಗವಹಿಸಿದ ಭಟ್ಕಳದ ನೂರಾರು ಭಕ್ತರು.

ಪ್ರತಿಷ್ಟಿತ ಶಾಲೆಗೆ ಬಾಂಬ್ ಬೆದರಿಕೆ. ದೌಡಾಯಿಸಿದ ಪೊಲೀಸರು.

ಮಹಾ ಕುಂಭಮೇಳಕ್ಕೆ ತೆರಳಲು ಸಬ್ಸಿಡಿ ದರದಲ್ಲಿ ಟಿಕೆಟ್.