ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal): ನಾಮಧಾರಿ ಸಮಾಜದ(Namadhari Community) ಗುರುಮಠ(Gurumatha) ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ(Vardhanti Mahotsava) ಹಾಗೂ ಪಾಲಕಿ ಮಹೋತ್ಸವ(Palaki Mahotsava) ಕಾರ್ಯಕ್ರಮ ಫೆಬ್ರವರಿ ಎರಡರಿಂದ  ಐದರವರೆಗೆ  ನಡೆಯಲಿದೆ ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ ಹೇಳಿದರು.

ಫೆಬ್ರವರಿ 2 ರವಿವಾರದಂದು ದೇವಸ್ಥಾನದ ಪ್ರಧಾನ ಅರ್ಚಕರ ನೇತ್ರತ್ವದಲ್ಲಿ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವರ 8ನೇ ಪುನರ್ ಪ್ರತಿಷ್ಠಾಂಗದ ವರ್ಧಂತಿ ಮಹೋತ್ಸವ ನಡೆಯಲಿದ್ದು, ಸಕಲ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.

ಫೆಬ್ರವರಿ 3 ಸೋಮವಾರದಂದು  ಸಂಜೆ 7 ಗಂಟೆಗೆ ಶ್ರೀ ಪದ್ಮಾವತಿ ಅಮ್ಮನವರ ಪಾಲಕಿಯ ಆಗಮನ. ಫೆಬ್ರವರಿ 4 ರಂದು ಮುಂಜಾನೆ ಗಣಪತಿ ಪೂಜೆ, ವಿಶ್ವಕ್ಸೇನಾರಾಧನೆ, ಪುಣ್ಯಹವಾಚನ, ಮಹಾ ಸಂಕಲ್ಪ, ಕಳಶಾರಾಧನೆ, ಗಣಹೋಮ ಹಾಗೂ ದೇವರಿಗೆ ತುಲಾಭಾರ ಸಮರ್ಪಣೆ.
ಬೆಳಿಗ್ಗೆ 10.30ಕ್ಕೆ  ಪರಮಪೂಜ್ಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ(Brahmananda Saraswati Swamiji) ಅವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಪೂಜ್ಯ ಗುರುಗಳಿಂದ ಶಿರ್ವಚನ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ.ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ಮಹಾ ಮಂಗಳಾರತಿ, 1 ಗಂಟೆಯಿಂದ 3 ಗಂಟೆತ ತನಕ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 3.30 ರಿಂದ ಶ್ರೀ ದೇವರ ಪಾಲಕಿ ಮೆರವಣಿಗೆ ನಡೆಯಲಿದ್ದು, ರಾತ್ರಿ 11 ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಫೆಬ್ರವರಿ 5  ರಂದು ಬೆಳಿಗ್ಗೆ 8.30 ಗಂಟೆಗೆ ಶ್ರೀ ದೇವರಿಗೆ ಓಕಳಿ ಸೇವೆ (ಅವಭ್ರತ ಸ್ನಾನ), 11 ಗಂಟೆಗೆ ಫಲಾವಳಿ ವಸ್ತುಗಳ ವಿಲೇವಾರಿ, ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ರಾತ್ರಿ 9.30 ಕ್ಕೆ ತ್ರಿನೇತ್ರ ಕಲಾತಂಡ ಉಪ್ಲಾಡಿ ಇವರಿಂದ ಸಾಮಾಜಿಕ ನಾಟಕ  “ಪಂಚ ದೀವಟಿಗೆ’ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಶ್ರೀ ದೇವರ ಪಾಲಕಿ ಉತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಿಸುವವರು ಫೆಬ್ರವರಿ 2 ರಿಂದ 3 ರ ಒಳಗೆ ಸಮರ್ಪಿಸಿ ಶ್ರೀ ದೇವರ ಕ್ರಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಕೃಷ್ಣ ನಾಯ್ಕ ಆಸರಕೇರಿ, ಪ್ರಕಾಶ ನಾಯ್ಕ,ಶಂಕರ ನಾಯ್ಕ, ಎಮ್.ಕೆ.ನಾಯ್ಕ, ಮಹಾಬಲೇಶ್ವರ ನಾಯ್ಕ, , ಶ್ರೀಧರ ನಾಯ್ಕ, ವಿಠ್ಠಲ ನಾಯ್ಕ ಮುಂತಾದ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಇದನ್ನು ಓದಿ : ಬಿಗ್ ಬಾಸ್ ಗೆದ್ದ ಹನುಮಂತ ಹಣ ಏನು ಮಾಡ್ತಾರೆ ಗೊತ್ತಾ.

ಪ್ರಮುಖ ಆರೋಪಿ ವಾಸಿಮ್ ವಲ್ಕಿಯವನಲ್ಲ. ಆತನನ್ನ ಹಿಡಿದುಕೊಟ್ಟವರಿಗೆ ಲಕ್ಷ ರೂ ಇನಾಮು.

ಮಹಾ ಕುಂಭಮೇಳಕ್ಕೆ ತೆರಳಲು ಸಬ್ಸಿಡಿ ದರದಲ್ಲಿ ಟಿಕೆಟ್.

ಪ್ರತಿಷ್ಟಿತ ಶಾಲೆಗೆ ಬಾಂಬ್ ಬೆದರಿಕೆ. ದೌಡಾಯಿಸಿದ ಪೊಲೀಸರು.

ಕುಂಭಮೇಳದಲ್ಲಿ ಭಾಗವಹಿಸಿದ ಭಟ್ಕಳದ ನೂರಾರು ಭಕ್ತರು.