ಭಟ್ಕಳ(BHATKAL): ತಾಲೂಕು ಇಲಾಖೆಯಲ್ಲಿ ಬಹಳ ವರ್ಷಗಳಿಂದ ವರ್ಗಾವಣೆಯಾಗದೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನ ಬೇರೆಡೆ ವರ್ಗಾವಣೆ ಮಾಡಬೇಕೆಂದು ಧರಣಿ ಕುಳಿತಿರುವ ಧರಣಿ ನಿರತರನ್ನ ಪೊಲೀಸರು ಬಂಧಿಸಿದ ಘಟನೆ ನಡೆದಿದೆ

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ  ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದವರನ್ನು  ಬಂಧಿಸಿ ತಾಲೂಕಾಡಳಿತ ಪ್ರತಿಭಟನೆ  ಖುಲ್ಲಾಪಡಿಸಿದೆ.

ತಾಲೂಕಾ ಆಡಳಿತದಿಂದ ಪೋಲಿಸ ಇಲಾಖೆಗೆ ಪತ್ರ ಬರೆದು, ಧರಣಿಗೆ ಅನುಮತಿ ನೀಡಿರುವುದನ್ನು  ರದ್ದು ಪಡಿಸಲಾಗಿದೆಂದು ತಿಳಿಸಲಾಗಿದೆ. ಧರಣಿ ನಡೆಸುತ್ತಿರುವ ಸ್ಥಳವು ತಾಲೂಕಿನ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿರುವುದರಿಂದ ಧರಣಿ ತೆರವುಗೊಳಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರ ಉಲ್ಲೇಖಿಸಿದ್ದಾರೆ ಎಂದು ಗ್ರಾಮೀಣ ಠಾಣೆಯ ಸಿ.ಪಿ.ಐ ಚಂದನ್ ಧರಣಿ ನಿರತರಿಗೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ  ಧರಣಿ ನಿರತರನ್ನು ಪೊಲೀಸ ವಾಹನದಲ್ಲಿ ಬಂಧಿಸಿ ನಗರ ಠಾಣೆಗೆ ಕರೆದೊಯ್ಯಲಾಯಿತು. ಸ್ಥಳದಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದಕ್ಕೂ ಮೊದಲು ಸಂಜೆಗೆ ತಹಶೀಲ್ದಾರ್ ಸ್ಥಳಕ್ಕೆ ಬಂದು ವರ್ಗಾವಣೆ ಮಾಡಲು 2 ತಿಂಗಳ ಕಾಲಾವಕಾಶ ಕೇಳಿ ಅವರ ಸಹಿ ಇರುವ ಲೆಟರ್ ಹೆಡ್  ಇವರು ಪತ್ರ ನೀಡಿದಾಗ ಧರಣಿಕಾರರು ಒಪ್ಪಲಿಲ್ಲ.  ವರ್ಗಾವಣೆ ಪ್ರಕ್ರಿಯೆ ನಿಮ್ಮ ಹಂತದಲ್ಲಿ ನಡೆಯುದಿಲ್ಲ .ನಿಮ್ಮ ಲೆಟರ್ ಹೆಡ್ ನಮಗೆ ಬೇಡ. ಜಿಲ್ಲಾಧಿಕಾರಿಗಳಿಂದ ಪತ್ರ ನೀಡಿದರೆ ಮಾತ್ರ ಧರಣಿ ನಿಲ್ಲಿಸುತ್ತೇವೆ ಎಂದರು. ಹೀಗಾಗಿ  ಧರಣಿ ಸ್ಥಳವನ್ನು ಪುರಸಭೆ ಮುಖ್ಯಾಧಿಕಾರಿ ಸಮ್ಮುಖದಲ್ಲಿ ಸಿಬ್ಬಂದಿಗಳು ತೆರವುಗೊಳಿಸಲಾಗಿದೆ .

ಇದನ್ನು ಓದಿ : ಗಂಗಾವಳಿ ನದಿಯಲ್ಲಿ ಈಶ್ವರ್ ಮಲ್ಪೆ ಹುಡುಕಾಟ

ಹಳೆ ಸೇತುವೆ ಕುಸಿದು ಇಬ್ಬರಿಗೆ ಗಾಯ

ಕಸ ಹೆಕ್ಕಿದ ಜಿಲ್ಲಾಧಿಕಾರಿ