ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪ್ರಯಾಗರಾಜ್‌ (Prayagraj):  ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು ಉತ್ತರಪ್ರದೇಶದ(Uttarapradesh) ಪ್ರಯಾಗರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ(Maha Kumbhamela) ಭಾಗವಹಿಸಿ  ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ (Yogi Adityanath) ಅವರ ಜೊತೆಗೆ ಯುಮುನಾ ನದಿಯಲ್ಲಿ (Yamuna River) ಬೋಟ್​ ಮೂಲಕ ತೆರಳಿದ ಮೋದಿ(Modi), ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ, ಗಂಗಾಮಾತೆಗೆ ನಮಸ್ಕರಿಸಿದರು.

ಮಾಹಿತಿ ಪ್ರಕಾರ ಕುಂಭಮೇಳದಲ್ಲಿ(Kumbha Mela) ಇವರೆಗೆ 382 ಮಿಲಿಯನ್​ ಜನರು ಪವಿತ್ರ ಸ್ನಾನ ಮಾಡಿದ್ದಾರೆ. ಮಂಗಳವಾರ ಭೂತಾನ್​ ದೊರೆ ಜಿಗ್ಮೆ ಖೇಸರ್ ನಮ್ಗ್ಯಾಲ್ ವಾಂಗ್‌ಚುಕ್ ಅವರು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡಿದ್ದರು. 

ಜನವರಿ 13ರಿಂದ ಪ್ರಯಾಗರಾಜ್ ನಲ್ಲಿ  ಮಹಾ ಕುಂಭಮೇಳ ಆರಂಭವಾಗಿದೆ. ದೇಶ-ವಿದೇಶಗಳಿಂದ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇಲ್ಲಿ ಫೆಬ್ರುವರಿ 26ರ ಮಹಾಶಿವರಾತ್ರಿಯವರೆಗೆ ಮಹಾ ಕುಂಭಮೇಳ(Maha Kumbhamela) ನಡೆಯಲಿದೆ.

ಡಿಸೆಂಬರ್​ 13, 2024ರಂದು ಪ್ರಯಾಗ್​​ರಾಜ್​ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, 5,500 ಕೋಟಿ ರೂ ವೆಚ್ಚದ 167 ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದರು.

ಇದನ್ನು ಓದಿ : ಮಹಾಕುಂಭ ಮೇಳ ಪ್ರಯಾಣಿಕರ ಗಮನಕ್ಕೆ. ಗೋವಾದಿಂದ ಉಚಿತ ರೈಲು.

ಪ್ರೇಯಸಿಗಾಗಿ ಕೋಟ್ಯಂತರ ರೂ ಮನೆ ಖರೀದಿಸಿದ ಈತ ಅಂತಿಥ ಕಳ್ಳನಲ್ಲ.

ಸಿನಿಮಾ ಅವಕಾಶ ಬಂದರೂ ನಿರಾಕರಿಸುತ್ತಿರುವ ಬಿಗ್ ಬಾಸ್ ವಿನ್ನರ್ ಹನುಮಂತ

ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ. ಹಾರಿ ಬಿದ್ದು ಚಾಲಕ ಮೃತ.

“ನೀ ಬರೆಸಿದಂತೆ” ಹಣವನ್ನ ಕ್ಯಾನ್ಸರ್ ರೋಗಿಗಳಿಗೆ ನೀಡಿ ಮಾದರಿಯಾದ ದಂಪತಿ.