ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಗೋವಾ (Goa) :  ಸರ್ಕಾರ ತಿಳಿಸಿದಂತೆ  ದೇವದರ್ಶನ ಯೋಜನೆಯಡಿ ಗೋವಾದಿಂದ ಉತ್ತರಪ್ರದೇಶದ ಪ್ರಯಾಗರಾಜ್(Goa to Prayagaraj)  ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ(Mahakumbha Mela) ಹೊರಡಲು ರೈಲು ಸಿದ್ದವಾಗಿದೆ.

ಗೋವಾದಿಂದ ಪ್ರಯಾಗರಾಜ್ ಗೆ (Prayagaraj) ಈ ವಿಶೇಷ ರೈಲಿನಲ್ಲಿ (Special Train) ಪ್ರಯಾಣ ಬೆಳೆಸುವರಿಗೆ ಪ್ರಯಾಣದ ಟಿಕೇಟ್(Ticket) ಮತ್ತು ಊಟವನ್ನು ಉಚಿತವಾಗಿಯೇ ಸರ್ಕಾರ(Free Government) ವ್ಯವಸ್ಥೆ ಮಾಡಲಿದೆ.  ಹೆಚ್ಚುವರಿ ಖರ್ಚು ಬಂದರೆ ಭಕ್ತರು ತಾವೇ ಭರಿಸಿಕೊಳ್ಳಬೇಕು ಎಂದು  ಸಮಾಜಕಲ್ಯಾಣ ಮಂತ್ರಿ (Social Welfare Minister) ಸುಭಾಷ ಫಳದೇಸಾಯಿ ಮಾಹಿತಿ ನೀಡಿದ್ದಾರೆ.

144 ವರ್ಷಗಳ ನಂತರ ನಡೆಯುತ್ತಿರುವ ಈ ಮಹಾಕುಂಭ ಮೇಳದಲ್ಲಿ(Mahakumbha Mela) ಗೋವಾದ ಜನತೆ(Goa People) ಭಾಗವಹಿಸಲು ಇಚ್ಚಿಸಿದ್ದರಿಂದ ಸರ್ಕಾರ ಈ ಯಾತ್ರೆಯನ್ನು ದೇವದರ್ಶನ ಯೋಜನೆಯಡಿ(Devadarshan Scheme) ಸೇರಿಸಿದೆ. ಹೀಗಾಗಿ ಮಡಗಾಂವನಿಂದ(Madgaum) ನೇರವಾಗಿ ಪ್ರಯಾಗರಾಜ್ ಗೆ ವಿಶೇಷ ರೈಲು(Special Train) ವ್ಯವಸ್ಥೆ ಮಾಡಲಾಗಿದೆ.

ಈ ಯೋಜನೆಯಡಿ ಪ್ರಯಾಣ ಬೆಳೆಸುವವರು ಫಾರ್ಮ್ ಭರ್ತಿ ಮಾಡಿ, ಪ್ರಯಾಣದ ಖಾತರಿ ಮಾಡಿಕೊಳ್ಳಬೇಕು.  ಒಟ್ಟೂ ಮೂರು ರೈಲು ಗೋವಾದಿಂದ ಪ್ರಯಾಗರಾಜ್ ಗೆ ತೆರಳಲಿದೆ. ಪ್ರತಿ ರೈಲಿನಲ್ಲಿ 1,000 ಪ್ರಯಾಣಿಕರನ್ನು ಕರೆದುಕೊಂಡು ಒಯ್ಯಲಾಗುತ್ತದೆ. ಪ್ರಯಾಗರಾಜ್ ತಲುಪಿದ 24 ಗಂಟೆಗಳ ನಂತರ ರೈಲು ಮತ್ತೆ ಗೋವಾಕ್ಕೆ ಹಿಂದಿರುಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಗೋವಾದಿಂದ ಪ್ರಯಾಗರಾಜ್ ಗೆ ತೆರಳಲು ಮೊದಲ ರೈಲು ಫೆಬ್ರುವರಿ 6 ರಂದು ಮಡಗಾಂವ ನಿಲ್ದಾಣದಿಂದ ಎರಡನೇ ರೈಲು ಫೆಬ್ರುವರಿ 13 ರಂದು ಸಂಜೆ 4.40 ಕ್ಕೆ ಮಡಗಾಂವ ನಿಲ್ದಾಣದಿಂದ ಮತ್ತು ಮೂರನೇಯ ರೈಲು ಫೆಬ್ರುವರಿ 21 ರಂದು ಸಂಜೆ 7.40 ಕ್ಕೆ ಮಡಗಾಂವನಿಂದ ಹೊರಟು ಫೆಬ್ರುವರಿ 26 ರಂದು ಬೆಳಿಗ್ಗೆ 10.30 ಕ್ಕೆ ಪ್ರಯಾಗರಾಜ್ ತಲುಪಲಿದೆ. ಹೆಚ್ಚಿನ ಮಾಹಿತಿಗಾಗಿ  ದೂರವಾಣಿ 0832-2232257 ನ್ನು ಸಂಪರ್ಕಿಸಬಹುದಾಗಿದೆ.

ಇದನ್ನು ಓದಿ : ಪ್ರೇಯಸಿಗಾಗಿ ಕೋಟ್ಯಂತರ ರೂ ಮನೆ ಖರೀದಿಸಿದ ಈತ ಅಂತಿಥ ಕಳ್ಳನಲ್ಲ.

ಸಿನಿಮಾ ಅವಕಾಶ ಬಂದರೂ ನಿರಾಕರಿಸುತ್ತಿರುವ ಬಿಗ್ ಬಾಸ್ ವಿನ್ನರ್ ಹನುಮಂತ

ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ. ಹಾರಿ ಬಿದ್ದು ಚಾಲಕ ಮೃತ.

“ನೀ ಬರೆಸಿದಂತೆ” ಹಣವನ್ನ ಕ್ಯಾನ್ಸರ್ ರೋಗಿಗಳಿಗೆ ನೀಡಿ ಮಾದರಿಯಾದ ದಂಪತಿ.

ಕಾರವಾರದಲ್ಲಿ ಎಎಸ್‌ಐ ಮನೆಗೆ ಕನ್ನ ಹಾಕಿದ ಕಳ್ಳರು.