ಭಟ್ಕಳ(Bhatkal) :  ಅತೀ ಪುರಾತನವಾದ ಶಕ್ತಿ ಕ್ಷೇತ್ರ ತನ್ನದೇ ಆದ ಇತಿಹಾಸ ಹೊಂದಿರುವ  ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ(Alvekodi shri Durgaparameshwari) ದೇವರ ಮಾರಿಜಾತ್ರಾ ಮಹೋತ್ಸವ(Maarijatra Mahotsava) ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತ್ತು.

ಎರಡು ದಿನಗಳ ಕಾಲ ರಾಜ್ಯ ಹಾಗೂ ಹೊರರಾಜ್ಯದಿಂದ  ಸಹಸ್ರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುವುದರ ಜೊತೆಗೆ ತಮ್ಮ ಹರಕೆಯನ್ನ ಸಲ್ಲಿಸಿದರು. ಭಕ್ತರು ಮಾರಿಕಾಂಬಾ ದೇವಿಯಲ್ಲಿ(Marikamba Devi) ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು.

ಕಡಲಮಕ್ಕಳ ಆರಾಧ್ಯ ದೈವವಾಗಿರುವ ಶ್ರೀ ದುರ್ಗಾಪರಮೇಶ್ವರಿ(Durgaparameshwari) ದೇವಿಯ ಜಾತ್ರೆಗೋಸ್ಕರ ಮೀನುಗಾರ ಕುಟುಂಬಗಳು(Fishermens Family) ವಿಶೇಷ ಸೇವೆ ಸಲ್ಲಿಸಿದರು. ಎಲ್ಲಾ ಜಾತಿ ಜನಾಂಗದವರು ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಜಾತ್ರಾ ಸಮಿತಿಯಿಂದ ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಮಾಡಿಕೊಳ್ಳಲಾಯಿತು. ಗದ್ದುಗೆಯಲ್ಲಿ ವಿರಾಜಮಾನಳಾದ ತಾಯಿಯನ್ನ ಬುಧವಾರ ಸಂಜೆ ಮೆರವಣಿಗೆಯಲ್ಲಿ ಕೊಂಡೋಯ್ಯಲಾಯಿತು.  ಅದ್ಭುತವಾದ ಚಂಡೆ ವಾದನ, ಮಹಿಳೆಯರ ಭಜನಾ ಕುಣಿತ, ಆಕರ್ಷಕವಾದ ಟ್ಯಾಬ್ಲೋ (Tablow) ಎಲ್ಲರ ಗಮನ ಸೆಳೆಯಿತು.

ಹುಲಿ, ಗೊರಿಲ್ಲಾ, ಶಿವನ ಮೂರನೇ ಕಣ್ಣು, ಸರಸ್ವತಿ, ವಿಷ್ಣು  ನರಸಿಂಹ ಸೇರಿದಂತೆ ವಿವಿಧ ಟ್ಯಾಬ್ಲೋಗಳು ಆಕರ್ಷಕವಾಗಿತ್ತು. ಅಳ್ವೆಕೋಡಿ ದೇವಾಲಯ ಅವರಣದಿಂದ  ಶ್ರೀರಾಮ ಭಜನಾ ಮಂದಿರದ ಮಾರ್ಗವಾಗಿ ಸಣಬಾವಿ(Sanabavi), ಯಕ್ಷೀಮನೆ(Yakshimane), ಮಾವಿನಕಟ್ಟೆ(Mavinakatte), ಸಾರದಹೊಳೆ(Saradahole), ಶಿರಾಲಿ(Shirali), ಗುಡಿಹಿತ್ಲು(Gudihitlu) ಕಂಚಿನ ದುರ್ಗಾಪರಮೇಶ್ವರಿ (Kanchina Durgaparameshwari) ದೇವಸ್ಥಾನದವರೆಗೆ(Temple) ಸಾಗಿತು. ನಂತರ ಧಾರ್ಮಿಕ ಕಾರ್ಯದೊಂದಿಗೆ ಮಾರಿಕಾಂಬಾ(Marikamba) ಹಾಗೂ ಮಾತಂಗಿ(Matangi) ಮೂರ್ತಿಯ ಭವ್ಯ  ವೆಂಕಟಾಪುರ ನದಿಯಲ್ಲಿ (Venkatapura River) ವಿಸರ್ಜನೆ ಮಾಡಲಾಯಿತು. ಮಾರಿಜಾತ್ರಾ ಮಹೋತ್ಸವ ಸಮಿತಿ(Marijatra Mahotsava Commitee) ಅಧ್ಯಕ್ಷ ರಾಮಾ ಮೊಗೇರ,  ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ  ದೇವಸ್ಥಾನದ ಆಡಳಿತ ಮಂಡಳಿ ತಿಮ್ಮಪ್ಪ ನಾರಾಯಣ ಹೊನ್ನಿಮನೆ, ಹನುಮಂತ ಮಂಜಪ್ಪ ನಾಯ್ಕ, ಬಿಳಿಯಾ ಕುಪ್ಪ ನಾಯ್ಕ, ಬಾಬು ಅಳಿಕೂಸನಮನೆ, ಯಾದವ ಮೊಗೇರ,  ಅರ್ಚಕ ಕುಟುಂಬದವರು ಉಪಸ್ಥಿತರಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡರು.

ಇದನ್ನು ಓದಿ : ಗಡ ಗಡ ಚಳಿಯಿಂದ ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದ ವ್ಯಕ್ತಿ ಸಾವು.

ಕರ್ತವ್ಯದಲ್ಲಿರುವಾಗಲೇ ಹವಾಲ್ದಾರ್ ಮೃತ. ಇಲಾಖೆಗೆ ಕೊನೆಯ ಸೆಲ್ಯೂಟ್ ಹೊಡೆದ ನಿತ್ಯಾನಂದ.

ಭಕ್ತ ಸಾಗರ ನಡುವೆ ಅಳ್ವೆಕೋಡಿ  ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ.