ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ (Udupi) : ನಗರದ ಅಂಬಾಗಿಲು- ಪೆರಂಪಳ್ಳಿ (Ambagilu Permpalli) ರಸ್ತೆಯಲ್ಲಿ ಆಕಸ್ಮಿಕವಾಗಿ ಉಂಟಾದ ಬೆಂಕಿ ಅವಘಡಕ್ಕೆ(Fire Incident)  ಗುಜರಿ ಅಂಗಡಿಯ ಗೋಡಾನ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ.

ಹನೀಫ್ ಎಂಬುವವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ (Scrap Shop) ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಹೆಚ್ಚಾಗಿ ಎಲ್ಲೆಡೆ ಅವರಿಸಿದೆ.

ಗುಜರಿ ಅಂಗಡಿಯ ಗೋಡೌನ್ ನಲ್ಲಿ ಟಯರ್(Tyre),  ಆಯಿಲ್(Oil), ಪೇಪರ್(Paper),  ಪ್ಲಾಸ್ಟಿಕ್ ಗಳನ್ನು(Plastic) ಶೇಖರಣೆ ಮಾಡಿ ಇಡಲಾಗಿತ್ತು. ಸುದ್ದಿ ತಿಳಿದ ತಕ್ಷಣ ಉಡುಪಿ(Udupi) ಮತ್ತು ಮಲ್ಪೆಯ (Malpe) ಅಗ್ನಿಶಾಮಕದಳ ಸಿಬ್ಬಂದಿಗಳು(Fire Brigade) ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಬೆಂಕಿಯನ್ನು ನಿಯಂತ್ರಿಸಲು ಕಷ್ಟವಾಗಿದ್ದರಿಂದ  ಅಕ್ಕಪಕ್ಕದ ಮನೆಯವರನ್ನು ಖಾಲಿ ಮಾಡಿಸಲಾಯಿತು. ಅಮೂಲ್ಯ ವಸ್ತುಗಳನ್ನು ಮತ್ತು ದಾಖಲೆಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದರು. ಹೆಚ್ಚುವರಿ ವಾಹನಗಳನ್ನು ತರಿಸಿಕೊಂಡು ಬೆಂಕಿ ಸುತ್ತಮುತ್ತ ಹರಡದಂತೆ ಅಧಿಕಾರಿಗಳು ಸಿಬ್ಬಂದಿಗಳು ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರು.

ಈ ಬೆಂಕಿ ಅವಘಡಕ್ಕೆ  ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಉಡುಪಿ ಮಣಿಪಾಲ ಪೊಲೀಸರು (Manipal Police) ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ : ಪ್ರೀತಿಯ ಡಾಬಾ, ಜೀವ ಬಂತು ಇನಿಯ. ಹಾವೇರಿಯಲ್ಲೊಂದು ಪವಾಡ.

ಮತ್ತೊಂದು ಸರ್ಕಾರಿ ಬಸ್ ಮರಕ್ಕೆ ಡಿಕ್ಕಿ.ಪ್ರಯಾಣಿಕರಿಗೆ ಗಾಯ

ಸಾಗುವಾನಿ ಮರ ಕಳ್ಳತನ. ಮೂವರ ಬಂಧನ.

ಅರಣ್ಯ ಸಿಬ್ಬಂದಿ ಮೇಲೆ ಹುಲಿ ದಾಳಿ.

ಹೊಸ ಅವತಾರದಲ್ಲಿ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಯತ್ನ.

ಒಂದೇ ದಿನ ಮೂರು ಬಾರೀ ಗುಡ್ಡ ಏರಿ ಇಳಿದ ಪರ್ವತಾರೋಹಿ.