ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal): ತಾಲೂಕಿನ ನಾಮಧಾರಿ ಸಮಾಜದ (Namadhari Community) ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಿಂದ(Nischalamakki Venkatramana Temple) ಶ್ರೀದೇವರ ಪಾಲಕಿ ಉತ್ಸವ(Palaki Utsava) ಅದ್ದೂರಿಯಿಂದ ಜರುಗಿತು.
ನಗರದಾಧ್ಯಂತ ಪಾಲಕಿ ಸಂಚರಿಸುವ ಸಂದರ್ಭದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ ಪ್ರದರ್ಶಿಸಿದರು. ಮಾಜಿ ಶಾಸಕ ಸುನೀಲ ನಾಯ್ಕ(Former MLA Sunil Naik) ಸೇರಿದಂತೆ ನಾಮಧಾರಿ ಸಮಾಜದ ಅಧಿಕ ಬಂಧುಗಳು ಉತ್ಸವದಲ್ಲಿ ಪಾಲ್ಗೊಂಡರು.
ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಶ್ರೀ ದೇವರಿಗೆ ತುಲಾಭಾರ ಸಮರ್ಪಣೆ ಮಾಡಲಾಯಿತು. ನಂತರ ವೆಂಕಟೇಶ್ವರ ದೇವರ ಪಾಲಕಿಯೂ ಸಹಸ್ರಕ್ಕೂ ಅಧಿಕ ಭಕ್ತರ ಜಯಘೋಷದಲ್ಲಿ ನಗರದಾದ್ಯಂತ ಸಂಚರಿಸಿತು. ಸೋನಾರಕೇರಿ(Sonarakeri), ನಗರ ಪೊಲೀಸ ಠಾಣಾ(Town Police Station) ಮಾರ್ಗವಾಗಿ ಹಳೆ ಬಸ್ ನಿಲ್ದಾಣದಿಂದ(Old Busstand) ತೆರಳಿ ಮಾರಿಗುಡಿ ದೇವಸ್ಥಾನದಿಂದ(Marigudi Temple) ಕಾಸ್ಮುಡಿ ದೇವಸ್ಥಾನ (Kasmudi Temple) ಸಮೀಪದ ಕಟ್ಟೆಯ ತನಕ ತೆರಳಿ ಅಲ್ಲಿ ಭಕ್ತರಿಂದ ವಿಶೇಷ ಪೂಜೆಯನ್ನು ಸಲ್ಲಿಸಿ ಅದೇ ಮಾರ್ಗವಾಗಿ ಚೌತನಿ ಕುದುರೆ ಬೀರಪ್ಪ ದೇವಸ್ಥಾನದಲ್ಲಿಯೂ(Kudure Beerappa Temple) ಪೂಜೆಯನ್ನು ಸಲ್ಲಿಸಲಿರುವ ಭಕ್ತರು ಪಾಲಕಿಯನ್ನು ರಘುನಾಥ ರಸ್ತೆಯ ಮೂಲಕ ಮಣ್ಕುಳಿಗೆ ಬರಲಿದೆ. ಮಣ್ಕುಳಿಯಲ್ಲಿನ ಭಕ್ತರು ಪೂಜೆ ಸಲ್ಲಿಸಿದ ಬಳಿಕ ಪಾಲಕಿಯೂ ಅಲ್ಲಿಂದ ವಾಪಸ್ಸು ಬಂದು ಪದ್ಮಾವತಿ ದೇವಸ್ಥಾನಕ್ಕೆ(Padmavati Temple) ಆಗಮಿಸಿತು. ನಂತರ ಕಳಿ ಹನುಮಂತ ದೇವಸ್ಥಾನ ಮಾರ್ಗವಾಗಿ ರಾತ್ರಿ 2 ಗಂಟೆ ಸುಮಾರಿಗೆ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ತೆರಳಿತು.
ಪಾಲಕಿ ಉತ್ಸವದ ಬಳಿಕ ರಾತ್ರಿ ಮಹಾ ಮಂಗಳಾರತಿ, ಹಾಗೂ ತೀರ್ಥ ಪ್ರಸಾದ ನೀಡಿ ಪಾಲಕಿಮಹೋತ್ಸವ ಮುಕ್ತಾಯಗೊಂಡಿತು. ಪಾಲಕಿ ಉದ್ದಕ್ಕೂ ಮಹಿಳೆಯ ಭಜನಾ ಕುಣಿತ, ಚಂಡೆ ಹಾಗೂ ಗೊಂಬೆ ಕುಣಿತ ಎಲ್ಲರ ಗಮನ ಸೆಳೆಯಿತು.
ಇದನ್ನು ಓದಿ : ಕುಂಭಮೇಳದಲ್ಲಿ ಪ್ರಧಾನಿ ಮೋದಿ ಪುಣ್ಯ ಸ್ನಾನ.
ಮಹಾಕುಂಭ ಮೇಳ ಪ್ರಯಾಣಿಕರ ಗಮನಕ್ಕೆ. ಗೋವಾದಿಂದ ಉಚಿತ ರೈಲು.
ಪ್ರೇಯಸಿಗಾಗಿ ಕೋಟ್ಯಂತರ ರೂ ಮನೆ ಖರೀದಿಸಿದ ಈತ ಅಂತಿಥ ಕಳ್ಳನಲ್ಲ.
ಸಿನಿಮಾ ಅವಕಾಶ ಬಂದರೂ ನಿರಾಕರಿಸುತ್ತಿರುವ ಬಿಗ್ ಬಾಸ್ ವಿನ್ನರ್ ಹನುಮಂತ
“ನೀ ಬರೆಸಿದಂತೆ” ಹಣವನ್ನ ಕ್ಯಾನ್ಸರ್ ರೋಗಿಗಳಿಗೆ ನೀಡಿ ಮಾದರಿಯಾದ ದಂಪತಿ.