ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭದ್ರಾವತಿ (Bhadravati) : ಅಕ್ರಮವಾಗಿ ಮರಳು ಮಾಪಿಯಾ ತಡೆಯಲು ಹೋದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ(Threat) ಹಾಕಿದ ಕಾರಣಕ್ಕೆ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ (Bhadravati oldtown Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ(Mines & Geology) ಇಲಾಖೆಯ ಮಹಿಳಾ ಅಧಿಕಾರಿ ಕೆ. ಕೆ. ಜ್ಯೋತಿ ಅವರು ದೂರು ದಾಖಲಿಸಿದ್ದಾರೆ. ಅಕ್ರಮ ಮರಳು ದರೋಡೆ(Sand Robbery) ದಾಳಿಯ ವೇಳೆ ಅವಾಚ್ಯವಾಗಿ ಬೈದು, ವಾಹನ ಮೈಮೇಲೆ ಹತ್ತಿಸಿ ಬೆದರಿಕೆ ಹಾಕಿದ್ದ ಹಿನ್ನಲೆಯಲ್ಲಿ ದೂರು ನೀಡಲಾಗಿದೆ.
ಶಾಸಕ ಸಂಗಮೇಶ್ ಅವರ ಪುತ್ರ ಬಸವೇಶ ಅವರ ಧ್ವನಿ ಎನ್ನಲಾದ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಹು ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೆಲವರ ವಿರುದ್ಧ ದೂರು ದಾಖಲಾಗಿದೆ. ಭದ್ರಾವತಿಯ ಸೀಗೆಬಾಗಿ ಬಾಬಳ್ಳಿ ಬಳಿಯಲ್ಲಿ ಭದ್ರಾ ನದಿಯಿಂದ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಜ್ಯೋತಿ ಅವರು ಮೊನ್ನೆ ರಾತ್ರಿ ಮೂವರು ಸಿಬ್ಬಂದಿಗಳೊಂದಿಗೆ ದಾಳಿ(Raid) ಮಾಡಲು ಸ್ಥಳಕ್ಕೆ ಹೋಗಿದ್ದರು. ಸ್ಥಳದಲ್ಲಿದ್ದ ಅಕ್ರಮ ಮರಳುಕೋರ ದಂಧೆಯವನು ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಅಧಿಕಾರಿ ಜ್ಯೋತಿಯವರಿಗೆ ಫೋನ್ ನೀಡಲು ಬರುತ್ತಾನೆ. ಆಗ
ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಜೀವ ಬೆದರಿಕೆ ಹಾಕುತ್ತಾನೆ. ಇದಕ್ಕೆ ಸಂಬಂಧಿಸಿ ಪೊಲೀಸ್ ದೂರು(Police Complaint) ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ(Chennagiri taluku) ಮಾವಿನಕಟ್ಟೆ ನಿವಾಸಿಗಳಾದ ರವಿ (38) ಬಿನ್ ಮಲ್ಲೇಶಪ್ಪ, ಹಾಸನ(Hasan) ಜಿಲ್ಲೆಯ ಅರಕಲಗೋಡಿನ ನಿವಾಸದ ವರಣ್ ಬಿನ್ ರಾಜಶೇಖರ್(34), ಸುರೇಂದ್ರ ಗೌಡ ಕ್ಯಾಂಪ್ ನ ಅಜಯ್ ಬಿನ್ ತಿಪ್ಪೇಶ್ (28) ಎಂಬುವರನ್ನ ಭದ್ರಾವತಿ(Bhadravati) ಹಳೇ ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಆರೇಳು ಜನರ ಹೆಸರು ನಮೂದಿಸಲಾಗಿದ್ದು, ಶಾಸಕ ಸಂಗಮೇಶ ಅವರ ಪುತ್ರನ ಹೆಸರು ದಾಖಲಾಗಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನು ಓದಿ : ಆಕಸ್ಮಿಕವಾಗಿ ಗೋಡೌನ್ ಗೆ ಬೆಂಕಿ ಸುತ್ತಮುತ್ತಲಿನ ಮನೆ ಖಾಲಿ.
ಪ್ರೀತಿಯ ಡಾಬಾ, ಜೀವ ಬಂತು ಇನಿಯ. ಹಾವೇರಿಯಲ್ಲೊಂದು ಪವಾಡ.
ಮತ್ತೊಂದು ಸರ್ಕಾರಿ ಬಸ್ ಮರಕ್ಕೆ ಡಿಕ್ಕಿ.ಪ್ರಯಾಣಿಕರಿಗೆ ಗಾಯ